ಕರ್ನಾಟಕ

karnataka

By

Published : Sep 21, 2020, 4:49 PM IST

Updated : Sep 21, 2020, 7:26 PM IST

ETV Bharat / state

ರಾಯಚೂರಿಗೆ ಮತ್ತೆ ಪ್ರವಾಹ ಭೀತಿ: ಜಿಲ್ಲಾಡಳಿತದಿಂದ ಗ್ರಾಮಸ್ಥರಿಗೆ ಎಚ್ಚರಿಕೆ

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ರಾಯಚೂರು ಜಿಲ್ಲೆಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ರಾಯಚೂರಿಗೆ ಮತ್ತೆ ಪ್ರವಾಹ ಭೀತಿ
ರಾಯಚೂರಿಗೆ ಮತ್ತೆ ಪ್ರವಾಹ ಭೀತಿ

ರಾಯಚೂರು: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.

ಇಂದು ಬೆಳಗ್ಗೆ ಲಕ್ಷಾಂತರ ಕ್ಯೂಸೆಕ್ ನೀರನ್ನ ನದಿಗೆ ಹರಿಬಿಟ್ಟಿದ್ದು, ಇದರಿಂದ ಜಿಲ್ಲೆಯ ಸಿಂಧನೂರು, ಮಾನವಿ, ರಾಯಚೂರು ತಾಲೂಕಿನ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿಗೆ ಜನ-ಜಾನುವಾರು ತೆರಳದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ನೀಡುವ ಮೂಲಕ ನದಿ ತೀರದಲ್ಲಿ ಡಂಗೂರ ಸಾರುವುದು, ಮೈಕ್ ಸೇರಿದಂತೆ ಇತರ ರೀತಿಯಲ್ಲಿ ಗ್ರಾಮಸ್ಥರನ್ನು ಎಚ್ಚರಿಸಲಾಗುತ್ತಿದೆ.

ರಾಯಚೂರಿಗೆ ಮತ್ತೆ ಪ್ರವಾಹ ಭೀತಿ

ಕಲಬುರಗಿ ಸೊನ್ನ ಬ್ಯಾರೇಜ್ ಭರ್ತಿಯಾಗಿ ನದಿಗೆ ಬ್ಯಾರೇಜ್​​ನಿಂದ ಸುಮಾರು 1.60 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ. ಈ ನೀರು ರಾಯಚೂರು ತಾಲೂಕಿನ ಕೃಷ್ಣ ನದಿಗೆ ಸೇರುತ್ತವೆ. ಹೀಗಾಗಿ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳು, ನಡುಗಡ್ಡೆ ಪ್ರದೇಶದ ಜನರಿಗೆ ನದಿ ತೀರಕ್ಕೆ ತೆರಳದಂತೆ, ಜಾನುವಾರುಗಳನ್ನು ನದಿಗೆ ಬೀಡದಂತೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಎಚ್ಚರಿಸಲಾಗುತ್ತಿದೆ.

Last Updated : Sep 21, 2020, 7:26 PM IST

ABOUT THE AUTHOR

...view details