ಕರ್ನಾಟಕ

karnataka

ETV Bharat / state

ಕ್ವಾರಂಟೈನ್ ಕೇಂದ್ರಗಳಿಂದ 206 ಮಂದಿ ಪರಾರಿ ವಿಚಾರ:  ಮೊಬೈಲ್​ ನಂಬರ್ ತಪ್ಪು ನೀಡಿದ್ದರಿಂದ ಎಡವಟ್ಟು! - ಮೊಬೈಲ್​ ನಂಬರ್ ತಪ್ಪು ನೀಡಿದ್ರಿಂದ ಎಡವಟ್ಟು

ಬೇರೆ ರಾಜ್ಯದಿಂದ ಬಂದ ವಲಸೆ ಕಾರ್ಮಿಕರನ್ನ ಜಿಲ್ಲಾಡಳಿತ ಕ್ವಾರೆಂಟೈನ್​​ಗೆ ಒಳಪಡಿಸಲಾಗಿತ್ತು. ಆದ್ರೆ ಕ್ವಾರೆಂಟೈನ್ ಒಳಗಾದವರು ತಪ್ಪು ಮೊಬೈಲ್ ಸಂಖ್ಯೆ ನೀಡಿದ್ದರಿಂದ 206 ಜನ ಪರಾರಿಯಾಗಿರುವಂತೆ ಗೊಂದಲ‌ ಮೂಡಿತ್ತು.

Quarantine
ಕ್ವಾರಂಟೈನ್ ಕೇಂದ್ರ

By

Published : Jun 4, 2020, 12:01 PM IST

ರಾಯಚೂರು:ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಿಂದ 206 ಮಂದಿ ಪರಾರಿಯಾಗಿದ್ದಾರೆ ಎನ್ನುವ ವಿಚಾರ ಸದ್ಯ ಜಿಲ್ಲಾದ್ಯಂತ ಆತಂಕ ಮೂಡಿಸಿತ್ತು. ಆದರೆ, ಮೊಬೈಲ್​ ಸಂಖ್ಯೆ ತಪ್ಪು ನೀಡಿರುವುದರಿಂದ ಈ ಎಡವಟ್ಟಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬೇರೆ ರಾಜ್ಯದಿಂದ ಬಂದ ವಲಸೆ ಕಾರ್ಮಿಕರನ್ನ ಜಿಲ್ಲಾಡಳಿತ ಕ್ವಾರೆಂಟೈನ್ ಒಳಪಡಿಸಲಾಗಿತ್ತು. ಈ ವೇಳೆ, ಕ್ವಾರೆಂಟೈನ್​ನಲ್ಲಿರುವ ಮಾಹಿತಿ ಸಂಗ್ರಹ ಮಾಡಿಕೊಳ್ಳಲಾಗುತ್ತಿದ್ದು, ಮೊಬೈಲ್ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಆದರೆ, ಕ್ವಾರೆಂಟೈನ್ ಒಳಗಾದವರು ತಪ್ಪು ಮೊಬೈಲ್ ಸಂಖ್ಯೆ ಅಥವಾ ಬೇರೆಯವರ ಸಂಖ್ಯೆಯನ್ನು ನೀಡಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಡೆಸಿದ ಬಯೋ ಫೇನ್ಚಿಂಗ್​ನಲ್ಲಿ 206 ಜನ ಪರಾರಿಯಾಗಿರುವಂತೆ ಗೊಂದಲ‌ ಮೂಡಿತ್ತು

ಆದರೆ, 206 ಜನ ಪರಾರಿಯಾಗಿಲ್ಲ. ಬದಲಾಗಿ ಕ್ವಾರಂಟೈನ್ ಕೇಂದ್ರದಲ್ಲೇ ಇದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಮೊಬೈಲ್ ಸಂಖ್ಯೆ ತಪ್ಪಾಗಿ ನೀಡಿರುವುದರಿಂದ ಗೊಂದಲ ಉಂಟು ಮಾಡಿದ್ದು, ಮಹಾರಾಷ್ಟ್ರದಿಂದ ಬಂದ ಜನರಲ್ಲೇ ಹೆಚ್ಚು ಜನ ತಪ್ಪು ಸಂಖ್ಯೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮೊಬೈಲ್ ನೆಟ್ ವರ್ಕ್ ಆಧಾರದ ಮೇಲೆ ಜನ ಪರಾರಿಯಾಗಿದ್ದಾರೆ ಅನ್ನೋದು ಗೊಂದಲ ಉಂಟು ಮಾಡಿತ್ತು. ನಿನ್ನೆ ಮಸ್ಕಿಯಿಂದ ಪರಾರಿಯಾಗಿದ್ದರೆನ್ನಲಾದ ಮೂರು ಜನರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದ್ದಾರೆ.

ABOUT THE AUTHOR

...view details