ಕರ್ನಾಟಕ

karnataka

By

Published : Oct 9, 2020, 9:18 PM IST

ETV Bharat / state

ರಾಯಚೂರು: ಹತ್ತಿ ಬೆಳೆಯ ಮಧ್ಯೆ ಮಾದಕ ಗಾಂಜಾ ಬೆಳೆದ ರೈತನ ಬಂಧನ

ಲಿಂಗಸುಗೂರು ತಾಲೂಕಿನ ವ್ಯಕರನಾಳ ಬಳಿಯ ಹೆಗ್ಗಾಪುರ ಗ್ರಾಮದ ರೈತನೊಬ್ಬ ತನ್ನ ಜಮೀನಿನಲ್ಲಿ ಹತ್ತಿ ಬೆಳೆಗಳ ಮಧ್ಯೆ ಸುಮಾರು 1.20 ಲಕ್ಷ ರೂ. ಮೌಲ್ಯದ ಗಾಂಜಾ ಸಸಿ ಬೆಳೆದಿದ್ದನು.

Murjuna
ಗಾಂಜಾ ಗಿಡ ಜಪ್ತಿ

ರಾಯಚೂರು:ಹತ್ತಿಬೆಳೆಗಳ ನಡುವೆ ಬೆಳೆದಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ಗಾಂಜಾ ಸಸಿಗಳನ್ನು ಮುದಗಲ್ಲ ಪೊಲೀಸರು ವಶಕ್ಕೆ ಪಡೆದು‌ಕೊಂಡಿದ್ದಾರೆ.

ಲಿಂಗಸುಗೂರು ತಾಲೂಕಿನ ವ್ಯಕರನಾಳ ಬಳಿಯ ಹೆಗ್ಗಾಪುರ ಸೀಮಾದ ಶರಣಪ್ಪ ಎಂಬುವವರು ತಮ್ಮ ಜಮೀನಿನಲ್ಲಿ ಹತ್ತಿ ಬೆಳೆಗಳ ಜೊತೆ ಗಾಂಜಾ ಸಸಿ ಬೆಳೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, 1.20 ಲಕ್ಷ ರೂ. ಮೌಲ್ಯದ ಗಾಂಜಾ ಸಸಿ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಗಿಡ ಜಪ್ತಿ

ಡಿವೈಎಸ್​ಪಿ ಎಸ್.ಎಸ್ ಹುಲ್ಲೂರು ನೇತೃತ್ವದಲ್ಲಿ ಸಿಪಿಐ ದೀಪಕ ಭೂಸರೆಡ್ಡಿ, ಪಿಎಸ್ಐ ಡಾಕೇಶ ಸಹಯೋಗದ ಪೊಲೀಸ್ ತಂಡ ದಾಳಿ ನಡೆಸಿತ್ತು.

ABOUT THE AUTHOR

...view details