ಮೈಸೂರು: ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಕೂಲಿ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದಾನೆ .
ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಯುವಕ ಸಾವು - mysore crime news
ಮೈಸೂರಿನಿಂದ ಗುಂಡ್ಲುಪೇಟೆಗೆ ಹೂವನ್ನು ಲೋಡ್ ಮಾಡಿಕೊಂಡು ಬರಲು ಕ್ರೇಟ್ಗಳ ಸಮೇತ ಲಾರಿಯಲ್ಲಿ ಹೋಗುತ್ತಿದ್ದಾಗ, ಲಾರಿಯ ವೇಗಕ್ಕೆ ಉರುಳುತ್ತಿದ್ದ ಕ್ರೇಟ್ಗಳನ್ನ ಹಿಡಿಯಲು ಹೋದ ಫಾಸಿಲ್,ಆಯತಪ್ಪಿ ಕ್ರೇಟ್ಗಳ ಸಮೇತ ರಸ್ತೆಗೆ ಉರುಳಿಬಿದ್ದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ.
![ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಯುವಕ ಸಾವು Young man Dies in mysore](https://etvbharatimages.akamaized.net/etvbharat/prod-images/768-512-8225004-thumbnail-3x2-nin.jpg)
ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಯುವಕ ಸಾವು
ಗೌಸಿಯಾನಗರದ ನಿವಾಸಿ ಫಾಸಿಲ್(20 ) ಮೃತ ಯುವಕ. ಮೈಸೂರು - ನಂಜನಗೂಡು ರಸ್ತೆಯ ಟೋಲ್ಗೇಟ್ ಬಳಿ ಘಟನೆ ನಡೆದಿದ್ದು, ಮೈಸೂರಿನಿಂದ ಗುಂಡ್ಲುಪೇಟೆಗೆ ಹೂವನ್ನು ಲೋಡ್ ಮಾಡಿಕೊಂಡು ಬರಲು ಕ್ರೇಟ್ಗಳ ಸಮೇತ ಲಾರಿಯಲ್ಲಿ ಹೋಗುತ್ತಿದ್ದಾಗ, ಲಾರಿಯ ವೇಗಕ್ಕೆ ಉರುಳುತ್ತಿದ್ದ ಕ್ರೇಟ್ಗಳನ್ನ ಹಿಡಿಯಲು ಹೋದ ಫಾಸಿಲ್,ಆಯತಪ್ಪಿ ಕ್ರೇಟ್ಗಳ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದಾನೆ.
ತೀವ್ರವಾಗಿ ಗಾಯಗೊಂಡ ಫಾಸಿಲ್ನನ್ನು ಆಸ್ಪತ್ರೆಗೆ ರವಾನೆ ಮಾಡುತ್ತಿದ್ದಾಗ, ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.