ಮೈಸೂರು:ಹಾವನ್ನು ಹಿಡಿಯಲು ಹೋದಾಗ ಅದು ಕೈಗೆ ಕಚ್ಚಿದ ಪರಿಣಾಮ ಯುವಕನ ಪ್ರಾಣ ಪಕ್ಷಿಯೇ ಹಾರಿಹೋಗಿರುವ ಘಟನೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
LIVE VIDEO: ಹೆಬ್ಬಾವು ಅಂತ ಹಿಡಿಯಲು ಹೋಗಿ ವಿಷ ಸರ್ಪದಿಂದ ಕಚ್ಚಿಸಿಕೊಂಡ ಯುವಕ ಸಾವು!
ಮೈಸೂರಿನ ಮಹದೇಶ್ವರ ಬೆಟ್ಟದಲ್ಲಿ ಹೆಬ್ಬಾವು ಅಂತ ಅಂತ ಹಿಡಿಯಲು ಹೋದ ಯುವಕನೊಬ್ಬ ವಿಷಪೂರಿತ ಹಾವಿನಿಂದ ಕಚ್ಚಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
Published : Apr 12, 2021, 12:38 PM IST
Published : Apr 12, 2021, 12:38 PM IST
|Updated : Apr 12, 2021, 10:40 PM IST
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಮಧು( 24) ಮೃತ ಯುವಕ. ಈತ ಎಲೆಕ್ಟ್ರಿಕ್ ಕೆಲಸಕ್ಕೆಂದು ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರ ಜೊತೆ ತೆರಳಿದ್ದು, ಅಲ್ಲಿ ಹೆಬ್ಬಾವು ಎಂದು ತಪ್ಪು ತಿಳಿದು ಮೆಟ್ಟಲಿನ ಮೇಲಿದ್ದ ವಿಷಪೂರಿತ ಹಾವನ್ನು ಹಿಡಿಯಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಹಾವು ಅವನ ಬಲ ಕೈಗೆ ಕಚ್ಚಿದೆ. ಬಳಿಕ ಯುವಕ ಅಸ್ವಸ್ಥಗೊಂಡಾಗ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮಧು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.