ಕರ್ನಾಟಕ

karnataka

ಮೋದಿಯವರಿಗೆ ಇಲ್ಲಿನ ನೆರೆ ಸಂತ್ರಸ್ತರ ಸ್ಥಿತಿಯ ಬಗ್ಗೆ ತಿಳಿಸಿದ್ದೇನೆ.. ಸಿಎಂ ಬಿಎಸ್‌ವೈ

By

Published : Sep 7, 2019, 1:12 PM IST

ಕಬಿನಿ ಜಲಾಶಯಕ್ಕೆ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಿದರು. ಇದೇ ವೇಳೆ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಬಗ್ಗೆ ನಿನ್ನೆ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಕಬಿನಿ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಣೆ

ಮೈಸೂರು: ಕಬಿನಿ ಜಲಾಶಯಕ್ಕೆ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಿದರು. ಇದೇ ವೇಳೆ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಬಗ್ಗೆ ನಿನ್ನೆ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ‌ ತುಳುಕುತ್ತಿವೆ. ಕೆಆರ್​ಎಸ್ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಕೊಡಲು ಸಮಸ್ಯೆ ಇಲ್ಲ. ಒಂದು ರೀತಿ ನೆಮ್ಮದಿಯಾಗಿದೆ. ಇವತ್ತು ರಾಜ್ಯದಲ್ಲಿ ಅತಿವೃಷ್ಟಿಯಿಂದ 1 ಲಕ್ಷ ಮನೆಗಳು ಹಾನಿಯಾಗಿವೆ. ಕೇಂದ್ರದ ನಿಯೋಗ ಬಂದು ಹೋಗಿದೆ. ಸದ್ಯದಲ್ಲೇ ಒಳ್ಳೆಯ ಪರಿಹಾರ ಕೊಡುತ್ತಾರೆ ಎಂದು ಸಿಎಂ ಬಿಎಸ್​ವೈ ಭರವಸೆ ವ್ಯಕ್ತಪಡಿಸಿದರು.

ಕಬಿನಿ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಣೆ

ಮೋದಿಯವರು ನಿನ್ನೆ ಬೆಂಗಳೂರಿಗೆ ಬಂದು ನೇರವಾಗಿ ಇಸ್ರೋಗೆ ಹೋದರು. ನಾನು ಇಲ್ಲಿಯ ಸ್ಥಿತಿಯ ಬಗ್ಗೆ ಅವರಿಗೆ ವಿವರಿಸಿದ್ದೇನೆ. ದೆಹಲಿಗೆ ಹೋಗಿ ಇಲ್ಲಿನ ಪ್ರವಾಹದ ಬಗ್ಗೆ ತಿಳಿಸಿದ ಮೇಲೆ ಕೇಂದ್ರ ತಂಡ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಬಂದು ಹೋಗಿದ್ದಾರೆ. ನಮಗಿಂತ ಹೆಚ್ಚಿನ ವಾಸ್ತವದ ಅರಿವು ಅವರಿಗೆ ಆಗಿದೆ. ಸದ್ಯದಲ್ಲಿ ಒಳ್ಳೆಯ ಪರಿಹಾರ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ಮೇಕೆದಾಟು ಯೋಜನೆಯನ್ನು ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾತನಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ABOUT THE AUTHOR

...view details