ಕರ್ನಾಟಕ

karnataka

ETV Bharat / state

ಶ್ರೀಕಂಠೇಶ್ವರ ಸನ್ನಿಧಿಯಲ್ಲಿ 20 ನಿಮಿಷ ಧ್ಯಾನಸ್ಥರಾದ ಬಿಎಸ್​ವೈ

ನಂಜನಗೂಡಿನ ಶ್ರೀಕಂಠೇಶ್ವರ ಗರ್ಭ ಗುಡಿಯ ಮುಂದೆ ಕುಳಿತು ಬಿ.ಎಸ್. ಯಡಿಯೂರಪ್ಪ ಪೂಜೆ ಸಲ್ಲಿಸಿದರು.

By

Published : Jun 17, 2019, 12:42 PM IST

ಶ್ರೀಕಂಠೇಶ್ವರ ದೇವಸ್ಥಾನದಲ್ಲಿ 20 ನಿಮಿಷ ಬಿಎಸ್​ವೈ ಪೂಜೆ

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ಗರ್ಭ ಗುಡಿಯ ಮುಂದೆ 20 ನಿಮಿಷಗಳ ಕಾಲ ಏಕಾಂತದಲ್ಲಿ ಕುಳಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರ ಜೊತೆ ಪೂಜೆ ಸಲ್ಲಿಸಿದರು.

ನಿನ್ನೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಬೆಳಿಗ್ಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸುವ ಮುನ್ನ ಗರ್ಭಗುಡಿಯ ಮುಂಭಾಗದಲ್ಲಿ ಕುರ್ಚಿ ಹಾಕಿಕೊಂಡು 20 ನಿಮಿಷಗಳ ಕಾಲ ಏಕಾಂತ ಧ್ಯಾನ ಮಾಡಿ ಶ್ರೀಕಂಠೇಶ್ವರನಲ್ಲಿ ಬೇಡಿಕೊಂಡರು.

ಶ್ರೀಕಂಠೇಶ್ವರ ದೇವಸ್ಥಾನದಲ್ಲಿ 20 ನಿಮಿಷ ಬಿಎಸ್​ವೈ ಪೂಜೆ

ಇಂದು ಕಾರಹುಣ್ಣಿಮೆ ಇರುವ ಪ್ರಯುಕ್ತ ಯಡಿಯೂರಪ್ಪ ಅವರು ಈ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಜೊತೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ABOUT THE AUTHOR

...view details