ಮೈಸೂರು:ಕೆಆರ್ಎಸ್ ಹಿನ್ನೀರಿಗೆ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಬಳಿಯ ಸಾಗರಕಟ್ಟೆ ಬಿಡ್ಜ್ ಬಳಿ ನಡೆದಿದೆ.
ಕೆಆರ್ಎಸ್ ಹಿನ್ನೀರಿಗೆ ಹಾರಿ ಯುವತಿ ಆತ್ಮಹತ್ಯೆ: ಇಲವಾಲ ಪೊಲೀಸರಿಂದ ತನಿಖೆ - ಮೈಸೂರು ಸುದ್ದಿ
ಮೈಸೂರಿನ ಇಲವಾಲ ಬಳಿಯ ಸಾಗರಕಟ್ಟೆ ಬ್ರಿಡ್ಜ್ ಬಳಿಯ ಯುವತಿಯೋರ್ವಳು ಕೆಆರ್ಎಸ್ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
![ಕೆಆರ್ಎಸ್ ಹಿನ್ನೀರಿಗೆ ಹಾರಿ ಯುವತಿ ಆತ್ಮಹತ್ಯೆ: ಇಲವಾಲ ಪೊಲೀಸರಿಂದ ತನಿಖೆ girl suicide](https://etvbharatimages.akamaized.net/etvbharat/prod-images/768-512-8110723-thumbnail-3x2-raaa.jpg)
ಯುವತಿ ಆತ್ಮಹತ್ಯೆ
ಗುಂಗ್ರಾಲ್ ಛತ್ರದ 18 ವರ್ಷದ ಯುವತಿ ಭಾವನ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ಇಲವಾಲ ಪೊಲೀಸರು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದ್ದು, ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.