ಕರ್ನಾಟಕ

karnataka

By

Published : Jul 21, 2020, 5:29 PM IST

ETV Bharat / state

ಕೆಆರ್​​ಎಸ್​ ಹಿನ್ನೀರಿಗೆ ಹಾರಿ ಯುವತಿ ಆತ್ಮಹತ್ಯೆ: ಇಲವಾಲ ಪೊಲೀಸರಿಂದ ತನಿಖೆ

ಮೈಸೂರಿನ ಇಲವಾಲ ಬಳಿಯ ಸಾಗರಕಟ್ಟೆ ಬ್ರಿಡ್ಜ್​​ ಬಳಿಯ ಯುವತಿಯೋರ್ವಳು ಕೆಆರ್​​ಎಸ್​ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

girl suicide
ಯುವತಿ ಆತ್ಮಹತ್ಯೆ

ಮೈಸೂರು:ಕೆಆರ್​​ಎಸ್​ ಹಿನ್ನೀರಿಗೆ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಬಳಿಯ ಸಾಗರಕಟ್ಟೆ ಬಿಡ್ಜ್ ಬಳಿ ನಡೆದಿದೆ.

ಗುಂಗ್ರಾಲ್​ ಛತ್ರದ 18 ವರ್ಷದ ಯುವತಿ ಭಾವನ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ಇಲವಾಲ ಪೊಲೀಸರು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದ್ದು, ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details