ಮೈಸೂರು: ನನಗೆ ಹಿನ್ನಡೆ ಯಾಕಾಯಿತು ಎಂಬ ಬಗ್ಗೆ ಮೈಸೂರು- ಕೊಡಗು ಉಸ್ತುವಾರಿ ಸಚಿವರೇ ಉತ್ತರಿಸಿಬೇಕು ಎಂದು ಪರಾಜಿತ ಅಭ್ಯರ್ಥಿ ಸಿ ಹೆಚ್. ವಿಜಯಶಂಕರ್ ಈ ಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈಗಿರುವ ಮೈತ್ರಿ, ಲೋಕಸಭೆಯಲ್ಲಿ ನಮಗೆ ಲಾಭ ತರುವ ಬದಲು ಹಾನಿಯನ್ನು ತಂದಿದೆ. ನಮಗೆ ಹೆಚ್ಚಿನ ಶಕ್ತಿ ತುಂಬುವ ಬದಲು ನಮ್ಮ ಶಕ್ತಿಯನ್ನೇ ಕಿತ್ತುಕೊಂಡಿದೆ. ಮೈತ್ರಿ ಸಂಪೂರ್ಣ ವಿಫಲವಾದಂತೆ ಕಾಣುತ್ತಿದೆ. ಎಲ್ಲಿ ವ್ಯತ್ಯಾಸವಾಯಿತು ಎಂಬ ಬಗ್ಗೆ ಕಾರಣ ಹುಡುಕುವುದು ಸರಿಯಲ್ಲ. ಮೈತ್ರಿಯಲ್ಲಿ ಎಲ್ಲರೂ ಒಂದೇ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಹಡಗು ಮುಳುಗಿದರೆ ಎಲ್ಲರೂ ಮುಳುಗುತ್ತಾರೆ. ನನಗೆ ಅನ್ಯಾಯವಾಗಿದೆ ಎಂದರೆ ಕಾಂಗ್ರೆಸ್ಗೆ ಅನ್ಯಾಯವಾಗಿದೆ ಎಂದರ್ಥ. ಈ ಹೊಣೆಯನ್ನು ಮೈತ್ರಿಯಲ್ಲಿದ್ದವರು ಹೊರಬೇಕು ಎಂದು ತಮ್ಮ ಸೋಲಿಗೆ ನಡೆದ ಒಳಸಂಚಿನ ಬಗ್ಗೆ ಸಿ ಹೆಚ್ ವಿಜಯಶಂಕರ್ ಬೇಸರ ವ್ಯಕ್ತ ಪಡಿಸಿದರು.