ಕರ್ನಾಟಕ

karnataka

ETV Bharat / state

ಹಾನಗಲ್‌, ಸಿಂದಗಿಯಲ್ಲಿ ಅತ್ಯಧಿಕ ಲೀಡ್​​​ನಿಂದ ಗೆಲ್ಲುತ್ತೇವೆ: ಸಚಿವ ಎಸ್‌.ಟಿ.ಸೋಮಶೇಖರ್

ನಾಳೆ ರಾಜ್ಯದ ಎರಡು ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಈ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಎರಡೂ ಕ್ಷೇತ್ರದಲ್ಲೂ ಗೆಲುವು ನಮ್ಮದೇ ಎಂದು ಸಚಿವ ಎಸ್​​​.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By

Published : Nov 1, 2021, 3:45 PM IST

st-somashekar
ಸಚಿವ ಸೋಮಶೇಖರ್ ವಿಶ್ವಾಸ

ಮೈಸೂರು: ಹಾನಗಲ್ ಮತ್ತು ಸಿಂದಗಿ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಈ ಚುನಾವಣೆ 2023ರ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಇದು ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆ. ಇದನ್ನು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ತೆಗೆದುಕೊಳ್ಳಬಾರದು. 2023ರಲ್ಲಿ ನಡೆಯುವ ಚುನಾವಣೆ ನಮ್ಮ 17 ಜನರಿಗೂ ವಿಶೇಷವಾಗೇನಿಲ್ಲ. ನಾವು ಬೇರೆ ಪಕ್ಷದಿಂದ ಬಂದು ಗೆದ್ದು, ಮಂತ್ರಿಗಳಾಗಿದ್ದೇವೆ. ಅದರಂತೆ ಮುಂದಿನ ಚುನಾವಣೆಯೂ ನಡೆಯಲಿದ್ದು, ಗೆಲುವು- ಸೋಲು ಸಾಮಾನ್ಯ. ಅಂದು ಯಾವ ವಾತಾವರಣ ಇರುತ್ತೋ ಅದರಂತೆ ಚುನಾವಣೆ ನಡೆಯಲಿದೆ ಎಂದರು.

'ಎರಡು ಕ್ಷೇತ್ರದಲ್ಲೂ ಅತ್ಯಧಿಕ ಲೀಡ್​​​ನಿಂದ ಗೆಲ್ಲುತ್ತೇವೆ'

ಮಂಡ್ಯದ ಮೈಮುಲ್​ನಲ್ಲಿ 1 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂಬ ಮಾಜಿ ಸಚಿವ ಚೆಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಂದು ಸಾವಿರ ಕೋಟಿ ಹಗರಣ ನಡೆದಿಲ್ಲ. ಹಾಲಿಗೆ ನೀರು ಮಿಕ್ಸ್ ಮಾಡುತ್ತಾರೆ ಎಂಬ ಆರೋಪವಿತ್ತು. ಈ‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಿಒಡಿ ತನಿಖೆಗೆ ಆದೇಶಿಸಿದ್ದರು. ಅದರಂತೆ ಮೂರ್ನಾಲ್ಕು ದಿನಗಳಲ್ಲಿ ಸಿಒಡಿ ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತದೆ. ಜೊತೆಗೆ ಸಹಕಾರ ಇಲಾಖೆಯವರೂ ಕೂಡಾ ತನಿಖೆ ಮಾಡುತ್ತಿದ್ದು, ಅವರು ಕೂಡಾ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಎರಡು ವರದಿಯನ್ನು ಇಟ್ಟುಕೊಂಡು ವಿಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ದಸರಾಗೆ ಖರ್ಚಾದ ಹಣವೆಷ್ಟು?

ನಾಡಹಬ್ಬ ದಸರಾ ಮಹೋತ್ಸವ ಆಚರಿಸಲು ಈ ಬಾರಿ ಸರ್ಕಾರದಿಂದ 6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಂಬೂಸವಾರಿ, ಆನೆಗಳ ನಿರ್ವಹಣೆ, ರಾಜಮನೆತನಕ್ಕೆ 40 ಲಕ್ಷ ರೂ. ಗೌರವಧನ, ಉಪ ಸಮಿತಿಗಳ ಖರ್ಚು, ಗಣ್ಯರು ಹಾಗೂ ಕಲಾವಿದರರಿಗೆ ಸ್ಥಳಾವಕಾಶ ಹಾಗೂ ಸಾರಿಗೆ ವೆಚ್ಚ, ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರ ವೆಚ್ಚಗಳಿಗೆ 4,22,07,679 ಕೋಟಿ ರೂಪಾಯಿ ವೆಚ್ಚವಾಗಿದೆ. ಇದರ ಜೊತೆಗೆ ಮಂಡ್ಯ, ಚಾಮರಾಜನಗರ ಹಾಗೂ ಹಾಸನಕ್ಕೆ ಒಟ್ಟು 1.20 ಕೋಟಿ ರೂ. ಬಿಡುಗಡೆ ಮಾಡಿದ್ದು, ಸರ್ಕಾರದಿಂದ ಬಿಡುಗಡೆಯಾದ 6 ಕೋಟಿ ಹಣದಲ್ಲಿ 5,42,07,679 ಕೋಟಿ ಹಣ ಖರ್ಚಾಗಿದೆ ಎಂದು ವಿವರಿಸಿದರು.

ಮೈಸೂರು ಪ್ರವಾಸಿಗರ ನಗರ. ಆದ್ದರಿಂದ ವಸ್ತು ಪ್ರದರ್ಶನದ ಆವರಣದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಮಾಡಲು ಚಿಂತಿಸಲಾಗಿದೆ. ಅದಕ್ಕನುಗುಣವಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲು ನೀಲಿ ನಕ್ಷೆ ತಯಾರಿಸಿ, ಸಭೆ ನಡೆಸಲು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಸಚಿವರು ಸಹ ಮೈಸೂರಿಗೆ ಆಗಮಿಸಿ, ಮುಂದಿನ ಯೋಜನೆಯ ಬಗ್ಗೆ ಚಿಂತನೆ ನಡೆಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ ಜತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್‌.. ಅಲ್ಪಸಂಖ್ಯಾತರು ಬಹಳ ಬುದ್ಧಿವಂತರಿದ್ದಾರೆ.. ವಿಪಕ್ಷ ನಾಯಕ ಸಿದ್ದರಾಮಯ್ಯ

ABOUT THE AUTHOR

...view details