ಕರ್ನಾಟಕ

karnataka

By

Published : Feb 11, 2020, 2:44 PM IST

ETV Bharat / state

ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ

ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶಾಸಕ ಎಸ್​.ಎ. ರಾಮದಾಸ್​​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಮಾಜಿ‌ ಸಂಸದ ವಿಜಯಶಂಕರ್, ಶಾಸಕ‌ ಎಲ್‌.ನಾಗೇಂದ್ರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು‌.

vijayshankar mla nagendra meets mla ramdas
ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ

ಮೈಸೂರು:ಲಘು ಹೃದಯಾಘಾತದಿಂದ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರ ಆರೋಗ್ಯವನ್ನು ಮಾಜಿ‌ ಸಂಸದ ವಿಜಯಶಂಕರ್, ಶಾಸಕ‌ ಎಲ್‌.ನಾಗೇಂದ್ರ ವಿಚಾರಿಸಿದರು‌.

ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿ‌. ಹೆಚ್. ವಿಜಯಶಂಕರ್, ರಾಮದಾಸ್ ಚೇತರಿಸಿಕೊಳ್ಳುತ್ತಿದ್ದು, ಯಾರು ಆತಂಕಕ್ಕೊಳಗಾಗಬಾರದು. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅವರು ಬೇಸರಗೊಂಡಿಲ್ಲ. ಒತ್ತಡದಿಂದ ಹೃದಯಾಘಾತವಾಗಿದ್ದು, ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದರು.

ಇದೇ ವೇಳೆ ಶಾಸಕ ನಾಗೇಂದ್ರ ಮಾತನಾಡಿ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆತಂಕಕ್ಕೊಳ್ಳಗಾಗಬಾರದು. ಎರಡು ದಿನಗಳಲ್ಲಿ ವಾಡ್೯ಗೆ ರಾಮದಾಸ್ ಅವರನ್ನು ಶಿಫ್ಟ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆಂದು ತಿಳಿಸಿದರು.

ABOUT THE AUTHOR

...view details