ಕರ್ನಾಟಕ

karnataka

By

Published : Sep 18, 2019, 9:50 PM IST

ETV Bharat / state

ತಮಿಳುನಾಡಿಗರು ಮೈಸೂರು ಪಾಕ್ ತಿನ್ನುವುದನ್ನು ಮರೆಯಬೇಕಾಗುತ್ತದೆ: ವಾಟಾಳ್ ಆಕ್ರೋಶ

ಮೈಸೂರು ಪಾಕ್ ನಮ್ಮದು ಎಂದು ಹೇಳಿದ ತಮಿಳುನಾಡಿಗರ ವಿರುದ್ಧ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.

ಮೈಸೂರ್​ಪಾಕ್​ ತಿಂದು ವಾಟಾಳ್​ ವಿನೂತನ ಪ್ರತಿಭಟನೆ

ಮೈಸೂರು: ಮೈಸೂರು ಪಾಕ್ ನಮ್ಮದು ಎಂದು ಹೇಳಿದ ತಮಿಳುನಾಡಿಗರ ವಿರುದ್ಧ ಮೈಸೂರು ಪಾಕ್​ನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ವಾಟಾಳ್ ನಾಗರಾಜ್ ಅವರು ವಿಶೇಷವಾಗಿ ಆಕ್ರೋಶ ವ್ಯಕ್ತಪಡಿಸಿದ್ರು.

ವಾಟಾಳ್​ ನಾಗರಾಜ್​ ವಿನೂತನ ಪ್ರತಿಭಟನೆ

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಎಲ್ಲದಕ್ಕೂ ಕ್ಯಾತೆ ತೆಗೆಯುತ್ತಾರೆ. ಕಾವೇರಿ, ಮೇಕೆದಾಟು ಆಯ್ತು‌ ಈಗ ಮೈಸೂರು ಪಾಕ್ ನಮ್ಮದು ಎನ್ನುತ್ತಿದ್ದಾರೆ. ತಮಿಳುನಾಡು ರಾಜಕೀಯ ಮಾಡಿಕೊಂಡು ಬರುತ್ತಿದೆ ಎಂದು ಕಿಡಿಕಾರಿದರು.

ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕವಾಗಿ ನಮಗೇ ಸೇರಿದೆ. ಆದರೆ ಇದರಲ್ಲಿ ಕ್ಯಾತೆ ತೆಗೆದರೆ ತಮಿಳುನಾಡಿಗರು ಮೈಸೂರು ಪಾಕ್ ತಿನ್ನುವುದನ್ನು ಮರೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಔರಾದ್ಕರ್ ವರದಿಗೆ ಒತ್ತಾಯ:

ಹಿಂದಿನ ಸರ್ಕಾರ ಪೊಲೀಸರ ಅನುಕೂಲಕ್ಕಾಗಿ ಔರಾದ್ಕರ್ ವರದಿಗೆ ಒಪ್ಪಿಗೆ ಸೂಚಿಸಿತು. ಆದರೆ ಬಿಜೆಪಿ ಸರ್ಕಾರ ವರದಿಯನ್ನು ತಳ್ಳಿ ಹಾಕಿದೆ. ಇದರ ವಿರುದ್ದ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಹಿಂದಿ ಹೇರಿಕೆ ಮಾಡಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಹುನ್ನಾರ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಅವರು ಹರಿಹಾಯ್ದರು.

ABOUT THE AUTHOR

...view details