ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಿ.ನರಸೀಪುರ ತಾಲೂಕಿನ
ನೇರಾಗ್ಯತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ದುರ್ಮರಣ - ತಿ.ನರಸೀಪುರದ ನೇರಾಗ್ಯತನಹಳ್ಳಿ ಬಳಿ ಅಪಘಾತ
ತಿ.ನರಸೀಪುರ ತಾಲೂಕಿನ ನೇರಾಗ್ಯತನಹಳ್ಳಿ ಗ್ರಾಮದ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
![ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ದುರ್ಮರಣ Three died in Car accident at Mysuru](https://etvbharatimages.akamaized.net/etvbharat/prod-images/768-512-11320101-thumbnail-3x2-hrss.jpg)
ಕಾರುಕಾರು ಮರಕ್ಕೆ ಡಿಕ್ಕಿಯಾಗಿ ಮೂವರು ಸಾವು
ತಾಲೂಕಿನ ಹಸುವಟ್ಟಿ ಗ್ರಾಮದ ಚಾಲಕ ಸುರೇಶ್ (24) ಮತ್ತು ಕಿರಣ್ (24) ಸ್ಥಳದಲ್ಲೇ ಮೃತಪಟ್ಟರೆ, ಮತೋರ್ವ ಪ್ರಯಾಣಿಕ ಮಹೇಶ್ (25) ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ತಿ.ನರಸೀಪುರ ಸಿಪಿಐ ಕೃಷ್ಣಪ್ಪ ಮತ್ತು ಪಿಎಸ್ಐ ಮಂಜು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.