ಕರ್ನಾಟಕ

karnataka

ಹುಣಸೂರು ಬೈ ಎಲೆಕ್ಷನ್​ಗೆ ಬದಲಿ ಅಭ್ಯರ್ಥಿ ಇಲ್ಲ: ಎಚ್.ವಿಶ್ವನಾಥ್

ಹುಣಸೂರು ಬೈ ಎಲೆಕ್ಷನ್​ಗೆ ಬದಲಿ ಅಭ್ಯರ್ಥಿಯನ್ನು ಹಾಕುವ ಮಾತೇ ಇಲ್ಲ. ಇವೆಲ್ಲ ಗಾಳಿ ಸುದ್ದಿಗಳು, ಹೈಕಮಾಂಡ್​ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಅನರ್ಹ ಶಾಸಕ ಹೆಚ್​. ವಿಶ್ವನಾಥ್​ ಹೇಳಿದರು.

By

Published : Sep 28, 2019, 8:34 PM IST

Published : Sep 28, 2019, 8:34 PM IST

Updated : Sep 28, 2019, 10:12 PM IST

ಎಚ್.ವಿಶ್ವನಾಥ್

ಮೈಸೂರು:ಹುಣಸೂರಿನ ಬೈ ಎಲೆಕ್ಷನ್​ಗೆ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಬದಲಿ ಹೆಸರಿಗೆ ಅನರ್ಹ ಶಾಸಕ ಎಚ್‌.ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.

ಹುಣಸೂರು ಉಪಚುನಾವಣೆಗೆ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ‌ ಮೈಸೂರಿನ ಜಲದರ್ಶಿನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ಇದೆಲ್ಲ ಗಾಳಿ ಸುದ್ದಿಗಳು , ಸಿಟ್ಟಿಂಗ್ ಕ್ಷೇತ್ರವನ್ನು ಯಾರಾದರೂ ಬಿಟ್ಟು ಕೊಡಲು ಸಿದ್ಧರಿರುತ್ತಾರಯೇ, ಚುನಾವಣೆಗೆ ಇನ್ನು ಬಹಳ‌ ದಿನ ಇದೆ. ಬಿಜೆಪಿ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿಲ್ಲ. ‌ಇನ್ನು ನನ್ನ ಮನವೊಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಅವರು ಮಾತನಾಡಿ, ಉಪಚುನಾವಣೆ ಟಿಕೆಟ್ ನೀಡುವ ಸಂಬಂಧ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

Last Updated : Sep 28, 2019, 10:12 PM IST

ABOUT THE AUTHOR

...view details