ಮೈಸೂರು:ಮನುಷ್ಯನಿಗೆ ಸಾವು ಎಲ್ಲಿ, ಹೇಗೆ ಬರುತ್ತದೋ ಗೊತ್ತಿಲ್ಲ.ಇದಕ್ಕೆ ಮೈಸೂರಿನಲ್ಲಿ ನಡೆದ ಈ ದುರಂತವೇ ಸಾಕ್ಷಿ.
ಮೈಸೂರಿನಲ್ಲಿ ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವು - The six year old boy dead in Mysore
ಬಾಲಕನ ಮೈಮೇಲೆ ಯಮ ಸ್ವರೂಪಿ ತೆಂಗಿನ ಮರ ಬಿದ್ದು ಸಾವಿಗೆ ಕಾರಣ ಸಾವಿಗೆ ಮಗನನ್ನು ಕಳೆದುಕೊಂಡ ಹೆತ್ತಮ್ಮನ ಆಕ್ರಂದನ ಮುಗಿಲು ಮುಟ್ಟಿದೆ.
![ಮೈಸೂರಿನಲ್ಲಿ ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವು The six year old boy dead in Mysore](https://etvbharatimages.akamaized.net/etvbharat/prod-images/768-512-12115982-thumbnail-3x2-dd.jpg)
ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವು
ತೆಂಗಿನ ಮರ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವಿಗೀಡಾಗಿದ್ದು ತಾಯಿಯ ಆಕ್ರಂದನ ಮನಕಲಕುವಂತಿತ್ತು.
ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದ ತೋಟದ ಮನೆಯ ಮುಂದೆ ಕ್ರಿಕೆಟ್ ಆಟವಾಡುತ್ತಿದ್ದ 6 ವರ್ಷದ ಬಾಲಕ ಅಭಯ್ ಮೇಲೆ ತೆಂಗಿನ ಮರ ಬಿದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕನ ಜೊತೆ ಆಟವಾಡುತ್ತಿದ್ದ ಬಾಲಕಿ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆತ್ತಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು.