ಕರ್ನಾಟಕ

karnataka

ETV Bharat / state

ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡ ಚೀಲಗಳು! - ನ್ಯಾಯಬೆಲೆ ಅಂಗಡಿ

ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಬಾಕ್ಸ್ ರಚಿಸಲಾಗಿತ್ತು. ಆದರೆ ತೀವ್ರ ಬಿಸಿಲಿದ್ದ ಕಾರಣ ಜನ ಅವರು ತಂದಿದ್ದ ಚೀಲವನ್ನು ಬಾಕ್ಸ್​​ನೊಳಗಿಟ್ಟು ಎಲ್ಲರೂ ನೆರಳಿನಲ್ಲಿ ಕುಳಿತಿದ್ದರು.

The queue of bags in front of the ration shop: people sitting in groups
ನ್ಯಾಯ ಬೆಲೆ ಅಂಗಡಿ ಮುಂದೆ ಚೀಲಗಳ ಕ್ಯೂ: ಗುಂಪಾಗಿ ಕುಳಿತ ಜನ

By

Published : Apr 9, 2020, 8:27 PM IST

ಮೈಸೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಮೈಸೂರಿನ ನಂಜನಗೂಡು ಬಳಿಯ ಕಳಲೆ ಗ್ರಾಮದಲ್ಲಿ ಜನ ಗುಂಪು ಗುಂಪಾಗಿ ರೇಷನ್ ಅಂಗಡಿ ಮುಂದೆ ಕುಳಿತಿದ್ದ ಘಟನೆ ನಡೆದಿದೆ.

ನ್ಯಾಯಬೆಲೆ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೆಂದು ಬಾಕ್ಸ್ ರಚಿಸಲಾಗಿತ್ತು. ಆದರೆ ತೀವ್ರ ಬಿಸಿಲಿದ್ದ ಕಾರಣ ಜನ ಅವರು ತಂದಿದ್ದ ಚೀಲಗಳನ್ನು ಬಾಕ್ಸ್​​ನೊಳಗೆ ಇಟ್ಟು, ಎಲ್ಲರೂ ನೆರಳಿನಲ್ಲಿ ಕುಳಿತಿದ್ದರು. ಬಳಿಕ ಅವರ ಸರತಿ ಬಂದಾಗ ಬಾಕ್ಸ್​ನಲ್ಲಿಟ್ಟಿದ್ದ ಚೀಲಕ್ಕೆ ರೇಷನ್ ತುಂಬಿಸಿಕೊಂಡು ಮನೆಗೆ ತರಳಿದ್ದಾರೆ.

ABOUT THE AUTHOR

...view details