ಕರ್ನಾಟಕ

karnataka

By

Published : Mar 5, 2020, 2:46 PM IST

ETV Bharat / state

ಪತ್ನಿಯನ್ನು ನೇಣು ಬಿಗಿದು ಕೊಲ್ಲಲು ಯತ್ನಿಸಿದ ಶಿಶು ಸಹಾಯಕ ಅಧಿಕಾರಿ: ಸಂತ್ರಸ್ತೆ ಪೋಷಕರ ದೂರು

ವರದಕ್ಷಿಣೆಗಾಗಿ ಪತ್ನಿಯನ್ನು ನೇಣುಬಿಗಿದು ಕೊಲ್ಲಲು ಪತಿ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

venkatapa_nagaveni
ವೆಂಕಟಪ್ಪ-ನಾಗವೇಣಿ

ಮೈಸೂರು: ವರದಕ್ಷಿಣೆಗಾಗಿ ಪತ್ನಿಯನ್ನು ನೇಣುಬಿಗಿದು ಕೊಲ್ಲಲು ಪತಿ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹುಣಸೂರು ತಾಲೂಕಿನ ಶಿಶು ಸಹಾಯಕ ಅಧಿಕಾರಿ ವೆಂಕಟಪ್ಪ ಅವರ ಪತ್ನಿ‌ ನಾಗವೇಣಿ ಅಲಿಯಾಸ್ ಮಣಿ (41) ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗವೇಣಿಯನ್ನು ಆಕೆಯ ಪತಿ ವರದಕ್ಷಿಣೆಗಾಗಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆಂದು ನಾಗವೇಣಿ ಪೋಷಕರು ಆರೋಪ ಮಾಡಿದ್ದಾರೆ.

1997ರಲ್ಲಿ ವೆಂಕಟಪ್ಪನಿಗೆ ಮಣಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಈ ದಂಪತಿ ವಾಸವಾಗಿದ್ದರು. ಇತ್ತೀಚಿಗೆ ವೆಂಕಟಪ್ಪ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹೊಡೆದು, ಬಡಿದು ಹಿಂಸಿಸಿದ್ದಾನೆ.

ಮಾರ್ಚ್ 3ರಂದು ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದಾಗ ಅಸ್ವಸ್ಥಳಾಗಿದ್ದ ಮಣಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನಾಗವೇಣಿ ಸಾವು‌ ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಂತರ ಸತ್ಯಾಂಶ ಹೊರಬರಲಿದೆ.

ABOUT THE AUTHOR

...view details