ಕರ್ನಾಟಕ

karnataka

ETV Bharat / state

ಜೆಡಿಎಸ್ ಜತೆ ಮೈತ್ರಿ ಮುಂದುವರಿಕೆಗೆ ಪಕ್ಷದಿಂದ ಸೂಚನೆ ಬಂದಿಲ್ಲ: ಶಾಸಕ ತನ್ವೀರ್ ಸೇಠ್ - Congress-JDS alliance in municipality election

ನಾನು ಯಾವುದೇ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ. ವರಿಷ್ಠರ ಸೂಚನೆ, ತೀರ್ಮಾನದಂತೆ ಆಗುತ್ತದೆ. ಮೇಯರ್‌ ಚುನಾವಣೆಗೆ ಇನ್ನೂ ಎರಡು ದಿನ ಇರುವುದರಿಂದ ಪಕ್ಷದ ಸೂಚನೆಯಂತೆ ನಡೆಯುತ್ತೇವೆ..

tanveer-sait
ಶಾಸಕ ತನ್ವೀರ್ ಸೇಠ್

By

Published : Aug 23, 2021, 8:33 PM IST

ಮೈಸೂರು:ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಂದುವರಿಸುವ ಸಂಬಂಧ ಪಕ್ಷದಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಪಾಲಿಕೆ ಕಚೇರಿ ವಲಯ 9ರಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ನಾನು ಯಾವುದೇ ಪಕ್ಷದೊಂದಿಗೆ ಮಾತುಕತೆ ಆಡಿಲ್ಲ. ವರಿಷ್ಠರ ಸೂಚನೆ, ತೀರ್ಮಾನದಂತೆ ಆಗುತ್ತದೆ. ಮೇಯರ್‌ ಚುನಾವಣೆಗೆ ಇನ್ನೂ ಎರಡು ದಿನ ಇರುವುದರಿಂದ ಪಕ್ಷದ ಸೂಚನೆಯಂತೆ ನಡೆಯುತ್ತೇವೆ ಎಂದರು.

ಮೈಸೂರು ನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲು ಪ್ರತಿ ಬಾರಿಯೂ ಬಿಜೆಪಿ ಪ್ರಯತ್ನಿಸುತ್ತಿದೆ. ಮೇಯರ್ ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡು ಹೋಗುತ್ತಿದ್ದೇವೆ. ಜೆಡಿಎಸ್‌-ಬಿಜೆಪಿ ಒಟ್ಟಾಗಿ ಸೇರಿದರೆ, ಮುಂದೆ ನಮ್ಮ ಪಕ್ಷವೂ ಒಂದು ನಿಲುವಿಗೆ ಬರುತ್ತದೆ ಎಂದು ತಿಳಿಸಿದರು.

ಓದಿ:ಹು-ಧಾ ಪಾಲಿಕೆ ಚುನಾವಣೆ.. ಟಿಕೆಟ್​ ಸಿಗದಿದ್ದಕ್ಕೆ ಪಕ್ಷೇತರರಾಗಿ ಕಣಕ್ಕಿಳಿದ ಅಭ್ಯರ್ಥಿಗಳು..

ABOUT THE AUTHOR

...view details