ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಅನುಮಾನಸ್ಪದವಾಗಿ ವೃದ್ಧ ಸಾವು: ಕೊಲೆ ಶಂಕೆ - ಅನುಮಾನಸ್ಪದವಾಗಿ ವೃದ್ಧ ಸಾವು

ವೃದ್ಧನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.

elder Man  death in Mysore
ಬಸವರಾಜು ಮೃತ ವೃದ್ಧ

By

Published : Jan 27, 2020, 2:44 PM IST

ಮೈಸೂರು:ವೃದ್ಧನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.

ಮೈಸೂರಿನಲ್ಲಿ ಅನುಮಾನಸ್ಪದವಾಗಿ ವೃದ್ಧ ಸಾವು

ನಂಜನಗೂಡು ಪಟ್ಟಣದ ಎನ್​ಜಿಒ ಕಾಲೋನಿಯ ನಿವಾಸಿ ಬಸವರಾಜು (60) ಮೃತ ವೃದ್ಧ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಹೊರಗೆ ಹೋಗಿ ಬರುತ್ತೇನೆ ಎಂದು ತನ್ನ ಮನೆಯವರಿಗೆ ತಿಳಿಸಿ ಹೋಗಿದ್ದ ವೃದ್ಧ, ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ.

ಈ ಸಂಬಂಧ ನಂಜನಗೂಡಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details