ಕರ್ನಾಟಕ

karnataka

By

Published : May 8, 2021, 12:42 PM IST

ETV Bharat / state

ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಅನುಮಾನಾಸ್ಪಾದ ಸಾವು

ಮೈಸೂರು ನಗರದ ಶ್ರೀರಾಂಪುರ ಎಸ್​​ಬಿಎಂ ಕಾಲೋನಿಯಲ್ಲಿ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗೃಹಿಣಿ ಅನುಮಾನಸ್ಪಾದ ಸಾವು
ಗೃಹಿಣಿ ಅನುಮಾನಸ್ಪಾದ ಸಾವು

ಮೈಸೂರು:ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಅನುಮಾನಾಸ್ಪಾದವಾಗಿ ಮೃತಪಟ್ಟಿರುವ ಘಟನೆ ನಗರದ ಶ್ರೀರಾಂಪುರ ಎಸ್​​ಬಿಎಂ ಕಾಲೋನಿಯಲ್ಲಿ ನಡೆದಿದೆ.

ಆಶಾರಾಣಿ (28) ಮೃತ ದುರ್ದೈವಿ. ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದವರಾದ ಈಕೆಯನ್ನ ಒಂದು ತಿಂಗಳ ಹಿಂದಷ್ಟೇ ಟೆಕ್ಕಿ ಪ್ರದೀಪ್ ಎಂಬಾತನ ಜೊತೆ ವಿವಾಹ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ನಗದು, 130 ಗ್ರಾಂ ಚಿನ್ನ ವರದಕ್ಷಿಣೆ ನೀಡಲಾಗಿತ್ತು ಎನ್ನಲಾಗಿದೆ.

ಮತ್ತಷ್ಟು ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿ ಆಶಾರಾಣಿಯನ್ನು ಕೊಲೆ ಮಾಡಲಾಗಿದೆ ಎಂದು ಮೃತ ಆಶಾರಾಣಿ ಪೋಷಕರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪತಿ ಪ್ರದೀಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಓದಿ : ಬುದ್ಧಿ ಹೇಳಿದ್ದಕ್ಕೆ ಸಿಟ್ಟು: ಅಪ್ಪ-ಅಮ್ಮನನ್ನೇ ಕೊಂದ 14 ವರ್ಷದ ಬಾಲಕ!

For All Latest Updates

ABOUT THE AUTHOR

...view details