ಕರ್ನಾಟಕ

karnataka

ETV Bharat / state

ಸಾರಾಯಿ ಕುಡಿಯಲು ಹಣ ಕೊಡದ್ದಕ್ಕೆ ಹೆತ್ತ ತಾಯಿಯನ್ನೇ ಹೊಡೆದು ಕೊಂದ ಪಾಪಿ ಪುತ್ರ! - ಮೈಸೂರಿನಲ್ಲಿಮ ತಾಯಿಯನ್ನು ಕೊಂದ ಮಗ

ಮಗನೇ ತಾಯಿಯನ್ನು ಹೊಡೆದು ಕೊಂದ ಘಟನೆ ಮೈಸೂರಿನ ತಿ‌.ನರಸೀಪುರ ತಾಲೂಕಿನ ನಡೆದಿದೆ.

Son killed his mother for not paying for alcohol
ಕುಡಿಯಲು ಹಣ ಕೊಡದಕ್ಕೆ ತಾಯಿಯನ್ನು ಕೊಂದ ಮಗ

By

Published : Apr 4, 2021, 6:27 PM IST

ಮೈಸೂರು : ಕುಡಿಯಲು ಹಣ ಕೊಟ್ಟಿಲ್ಲವೆಂದು ಮರದ ಪಟ್ಟಿಯಿಂದ ಹೊಡೆದು ಮಗನೇ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ತಿ‌.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಕುರುಬಾಳನಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜೋಗಿ ರಾಮೇಗೌಡರ ಎಂಬವರ ಪತ್ನಿ ಗೌರಮ್ಮ (55) ಕೊಲೆಗೀಡಾಗಿರುವ ಮಹಿಳೆ. ಈಕೆಯ 26 ವರ್ಷದ ಮೂಗ ಮಗ ಶಾಂತರಾಜು ಮದ್ಯ ವ್ಯಸನಿಯಾಗಿದ್ದಾನೆ. ಮನೆಯಲ್ಲಿದ್ದ ಹಣ ಕುಡಿಯಲು ಕೊಟ್ಟಿಲ್ಲವೆಂಬ ಕಾರಣಕ್ಕೆ ಮರದ ಪಟ್ಟಿಯಿಂದ ತಾಯಿಯ ಮುಖಕ್ಕೆ ಹೊಡೆದು, ನಂತರ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ.

ಕೊಲೆ ಆರೋಪಿ ಶಾಂತರಾಜು

ಓದಿ : ಹೋಲಿಕಾ ದಹನ್​ ವೇಳೆ ಯುವಕನನ್ನ ಧಗ ಧಗಿಸುವ ಬೆಂಕಿಗೆ ತಳ್ಳಿದ ವ್ಯಕ್ತಿ!

ತಾಯಿಯನ್ನೇ ಕೊಂದ ಆರೋಪಿ ಶಾಂತರಾಜುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details