ಕರ್ನಾಟಕ

karnataka

ETV Bharat / state

ಕರ್ನಾಟಕ ರೇಷ್ಮೆ ಕಾರ್ಖಾನೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸೋಮಣ್ಣ - v. Somanna visit to Karnataka silk factory in mysore

ರೇಷ್ಮೆ ಹಾಗೂ ವಸತಿ ಸಚಿವ ವಿ.ಸೋಮಣ್ಣ ಇಂದು ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಕಾರ್ಖಾನೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಚಿವ ಸೋಮಣ್ಣ

By

Published : Nov 2, 2019, 5:45 PM IST

ಮೈಸೂರು:ಕರ್ನಾಟಕ ರೇಷ್ಮೆ ಕಾರ್ಖಾನೆ ಘಟಕಕ್ಕೆ ರೇಷ್ಮೆ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

ಕರ್ನಾಟಕ ರೇಷ್ಮೆ ಕಾರ್ಖಾನೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸೋಮಣ್ಣ

ರೇಷ್ಮೆ ಘಟಕಕ್ಕೆ ಭೇಟಿ ನೀಡಿದ ಸಚಿವ‌ ಸೋಮಣ್ಣ, ಹಳೆಯ ರೇಷ್ಮೆ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರಗಳನ್ನು ಖರೀದಿಸಿ ನೂತನ ತಂತ್ರಜ್ಞಾನದ ಮೂಲಕ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಎಸ್​ಸಿಸಿ ಘಟಕದ ವ್ಯವಸ್ಥಾಪಕ ಕೃಷ್ಣಪ್ಪರಿಗೆ ಕ್ಲಾಸ್: ರೇಷ್ಮೆ ಘಟಕಕ್ಕೆ ಭೇಟಿ ನೀಡಿದ ಸಚಿವ ಸೋಮಣ್ಣ, ವ್ಯವಸ್ಥಾಪಕ ಕೃಷ್ಣಪ್ಪರಿಗೆ ಮೊದಲು ಕಾರ್ಖಾನೆಯನ್ನು ಅಭಿವೃದ್ಧಿ ಮಾಡಿ, ಉದ್ಯೋಗ ಸೃಷ್ಠಿ ಮಾಡಿ ಎಂದು ಕ್ಲಾಸ್ ತೆಗೆದುಕೊಂಡರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಷ್ಮೆ ಘಟಕವನ್ನು ಸ್ಥಾಪನೆ ಮಾಡಿ ಶತಮಾನ ಕಳೆದಿದೆ. ಇದನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಉದ್ಯೋಗ ಸೃಷ್ಟಿ ಹಾಗೂ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರ ವೇತನ ಹೆಚ್ಚಳದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಅಶೋಕಪುರಂ‌ನಲ್ಲಿರುವ ರೇಷ್ಮೆ ಘಟಕಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಆಗಮಿಸಿದ ಮೂಗೂರು ಹೊಸಳ್ಳಿ ಗ್ರಾಮದ ನಿವಾಸಿ ಚಾಮರಾಜ, ತಿ.ನರಸೀಪುರ ರೇಷ್ಮೆ ಘಟಕದಲ್ಲಿ ಆರು ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ಸೆ. 21ರಂದು ಯಂತ್ರಕ್ಕೆ ಕಾಲು ಸಿಲುಕಿ ಮಂಡಿ ಚಿಪ್ ಹೋಗಿದೆ. ಆದರೆ ನನಗೆ ಚಿಕಿತ್ಸೆ ವೆಚ್ಚ ನೀಡಲು ಇಲಾಖೆ ಮುಂದಾಗುತ್ತಿಲ್ಲವೆಂದು ಸಚಿವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು, ಕೆಎಸ್​ಸಿಸಿ ವ್ಯವಸ್ಥಾಪಕಿ ಲೀಲಾ ಮಂಜುನಾಥ್ ಅವರೊಂದಿಗೆ ಮಾತನಾಡಿ ಗುತ್ತಿಗೆ ನೌಕರನ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣ ಭರಿಸಿ ಅದರ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ABOUT THE AUTHOR

...view details