ಕರ್ನಾಟಕ

karnataka

ETV Bharat / state

ಗಲಭೆಗೆ ಪೊಲೀಸರ ವೈಫಲ್ಯ ಕಾರಣ: ಎಸ್​ಡಿಪಿಐ ಕಾರ್ಯದರ್ಶಿ ಆರೋಪ

ಡಿ.ಜೆ ಹಳ್ಳಿ ಗಲಾಟೆ ಪ್ರಕರಣದ ಮಧ್ಯೆ ಎಸ್​ಡಿಪಿಐಯನ್ನು ಎಳೆದು ತರುವುದು ಸರಿಯಲ್ಲ. ನಮ್ಮದು ಜವಾಬ್ದಾರಿಯುತ ಪಕ್ಷ. ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.

By

Published : Aug 12, 2020, 4:12 PM IST

police failure reason for Bengaluru riots
ಎಸ್​ಡಿಪಿಐ ಕಾರ್ಯದರ್ಶಿ ಅಬ್ದುಲ್ ಮಜೀದ್​

ಮೈಸೂರು: ಡಿ.ಜೆ. ಹಳ್ಳಿ ಗಲಭೆಗೆ ಪೋಲಿಸರ ವೈಫಲ್ಯ ಕಾರಣ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಎಸ್​ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದರು.

ಈಟಿವಿ ಭಾರತ್​ ಜೊತೆ ಮಾತನಾಡಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರಳಿಯ ನವೀನ್ ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲತಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಸಮುದಾಯದ ಜನರು ಡಿ.ಜೆ ಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಲು ಹೋದಾಗ ಎರಡು ಗಂಟೆ ಕೊಡಿ ಎಂದು ಹೇಳಿ ಪೊಲೀಸರು ಹೇಳಿದ್ದರು. ಹೀಗಾಗಿ, ಜನರು ಆಕ್ರೋಶಿತರಾಗಿದ್ದಾರೆ ಎಂದರು.

ಎಸ್​ಡಿಪಿಐ ಕಾರ್ಯದರ್ಶಿ ಅಬ್ದುಲ್ ಮಜೀದ್​

ನಿನ್ನೆಯ ಪ್ರಕರಣದ ಮಧ್ಯೆ ಎಸ್​ಡಿಪಿಐಯನ್ನು ಎಳೆದು ತರುವುದು ಸರಿಯಲ್ಲ. ನಮ್ಮದು ಜವಾಬ್ದಾರಿಯುತ ಪಕ್ಷ. ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ಮುಜಾಮಿಲ್ ಪಾಷ ಮನವಿ ಮಾಡಲು ಮೈಕ್​ ಮೂಲಕ ಮನವಿ ಮಾಡಿದ್ದಾನೆ ವಿನಹಃ, ಯಾವುದೇ ಗಲಾಟೆಗೆ ಪ್ರಚೋದನೆ ನೀಡಿಲ್ಲ. ಆದರೂ, ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆತ ಪ್ರಚೋದನೆ ನೀಡಿದ ಅಥವಾ ಕಲ್ಲು ಹೊಡೆದ ವಿಡಿಯೋ ಇದ್ದರೆ ಬಹಿರಂಗಪಡಿಸಿ ಎಂದು ಹೇಳಿದರು.

ಬಿಜೆಪಿ ಸರ್ಕಾರವನ್ನು ತೃಪ್ತಿಪಡಿಸಲು ಪೊಲೀಸರು ಪ್ರಕರಣವನ್ನು ತಿರುಚುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದರು.

ABOUT THE AUTHOR

...view details