ಕರ್ನಾಟಕ

karnataka

By

Published : Jun 25, 2019, 6:46 PM IST

Updated : Jun 25, 2019, 7:51 PM IST

ETV Bharat / state

ಆಧಾರ್ ಕಾರ್ಡ್​ ತಿದ್ದುಪಡಿಗೆ ರಾತ್ರಿಯಿಡಿ ಸರತಿ ಸಾಲು: ಪರ್ಯಾಯ ಮಾರ್ಗಕ್ಕೆ ಸಾರ್ವಜನಿಕರ ಆಗ್ರಹ

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿಆಧಾರ್​ ಕಾರ್ಡ್​ ತಿದ್ದುಪಡಿಗೆ ರಾತ್ರಿ, ಹಗಲು ಎನ್ನದೇ ಸಾಲುಗಟ್ಟಿ ನಿಂತಿರುವ ದೃಶ್ಯ ಈಗ ವೈರಲ್​ ಆಗಿದೆ. ಕೂಡಲೇ ತಿದ್ದುಪಡಿಗೆ ಪರ್ಯಾಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ನಂಜನಗೂಡು ಪಟ್ಟಣದಲ್ಲಿ ಆಧಾರ್ ಕಾರ್ಡ್​ ತಿದ್ದುಪಡಿಗೆ ಸಾಲುಗಟ್ಟಿ ನಿಲ್ಲುತ್ತಿರುವ ಸಾರ್ವಜನಕರು

ಮೈಸೂರು: ಮಕ್ಕಳು, ವೃದ್ಧರು ಬಿಸಿಲು, ಮಳೆ ಎನ್ನದೇ ಸರತಿ ಸಾಲಲ್ಲಿ ನಿಂತು ರಾತ್ರಿ, ಹಗಲು ಎನ್ನದೆ ಆಧಾರ್​ ಕಾರ್ಡ್​ ತಿದ್ದುಪಡಿಗಾಗಿ ಕಾಯುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ನಂಜನಗೂಡಿನಲ್ಲಿ ಕಂಡುಬಂತು.

ನಂಜನಗೂಡು ಪಟ್ಟಣದಲ್ಲಿ ಆಧಾರ್ ಕಾರ್ಡ್​ ತಿದ್ದುಪಡಿಗೆ ಸಾಲುಗಟ್ಟಿ ನಿಲ್ಲುತ್ತಿರುವ ಸಾರ್ವಜನಕರು

ಕಳೆದ 15 ದಿನಗಳಿಂದ ಜನರು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಸಾಲುಗಟ್ಟಿ ನಿಂತಿರುವುದು ಇಲ್ಲಿನ ನಂಜನಗೂಡು ಪಟ್ಟಣದಲ್ಲಿ. ಆಧಾರ್ ಕಾರ್ಡ್​ನಲ್ಲಿನ ಲೋಷದೋಷಗಳನ್ನು ಸರಿಪಡಿಕೊಳ್ಳಲು ಕೆನರಾ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಎದುರು ಕಾಯುತ್ತಿದ್ದಾರೆ.

‌ದಿನಕ್ಕೆ 15 ಜನರ ಆಧಾರ್ ಕಾರ್ಡ್​ ಅನ್ನು ಮಾತ್ರ ತಿದ್ದುಪಡಿ ಮಾಡಲಾಗುತ್ತಿರುವುದರಿಂದ ಜನದಟ್ಟನೆ ಹೆಚ್ಚಾಗುತ್ತಿದೆ. ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ತಮ್ಮ ನಿತ್ಯ ಕಾಯಕ ಬಿಟ್ಟು ಹೀಗೆ ಸಾಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಇದು ಅವರ ಆದಾಯಕ್ಕೂ ಕತ್ತರಿಯಾಗಿರುವುದು ಇನ್ನೊಂದು ಬೇಸರದ ಸಂಗತಿ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಜನಗಳ ಒತ್ತಾಯ.

Last Updated : Jun 25, 2019, 7:51 PM IST

For All Latest Updates

TAGGED:

ABOUT THE AUTHOR

...view details