ಕರ್ನಾಟಕ

karnataka

By

Published : Nov 30, 2021, 8:43 PM IST

ETV Bharat / state

ಮುನಿಸು ಮರೆತು ದೋಸ್ತಿ ಮುಂದುವರೆಸಿದ ಆರ್‌ ಧ್ರುವನಾರಾಯಣ್- ಹೆಚ್‌ ಸಿ ಮಹದೇವಪ್ಪ..

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಂಸದರಾಗಿದ್ದ ಧೃವನಾರಾಯಣ್ ಮೇಲೆ ಮಹದೇವಪ್ಪ ಮುನಿಸಿಕೊಂಡಿದ್ದರು. ಚುನಾವಣೆ ನಡೆದ ನಂತರ ನಡೆದ ಯಾವುದೇ ಕಾಂಗ್ರೆಸ್ ಸಭೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳದ ನಾಯಕರು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದರು. ಮಹದೇವಪ್ಪ ಹಾಗೂ ಆರ್.ಧೃವನಾರಾಯಣ್ ಒಂದಾಗಿ ಪ್ರಚಾರಕ್ಕಿಳಿದಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಲಾಭಧಾಯಕವೆಂದೇ ಹೇಳಲಾಗಿದೆ..

ಮುನಿಸು ಮರೆತು ದೋಸ್ತಿ ಮುಂದುವರೆಸಿದ ಧ್ರುವನಾರಾಯಣ್-ಮಹದೇವಪ್ಪ
ಮುನಿಸು ಮರೆತು ದೋಸ್ತಿ ಮುಂದುವರೆಸಿದ ಧ್ರುವನಾರಾಯಣ್-ಮಹದೇವಪ್ಪ

ಮೈಸೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನುಭವಿಸಿದ ಕಾರಣದಿಂದ ಆರ್.ಧ್ರುವನಾರಾಯಣ್ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ದೋಸ್ತಿ ಮುಂದುವರೆಸಿದ ಆರ್‌ ಧ್ರುವನಾರಾಯಣ್- ಡಾ. ಹೆಚ್‌ ಸಿ ಮಹದೇವಪ್ಪ..

ಕಳೆದ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದ ಧೃವನಾರಾಯಣ್ ಮತ್ತು ಹೆಚ್.ಸಿ ಮಹದೇವಪ್ಪ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ತಮ್ಮ ಮುನಿಸನ್ನ ಮರೆತು ಒಂದಾಗಿದ್ದಾರೆ. ನಂಜನಗೂಡಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಒಂದೇ ವೇದಿಕೆ ಹಂಚಿಕೊಂಡ ನಾಯಕರು, ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಂಸದರಾಗಿದ್ದ ಧೃವನಾರಾಯಣ್ ಮೇಲೆ ಮಹದೇವಪ್ಪ ಮುನಿಸಿಕೊಂಡಿದ್ದರು.

ಚುನಾವಣೆ ನಡೆದ ನಂತರ ನಡೆದ ಯಾವುದೇ ಕಾಂಗ್ರೆಸ್ ಸಭೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳದ ನಾಯಕರು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದರು. ಮಹದೇವಪ್ಪ ಹಾಗೂ ಆರ್.ಧೃವನಾರಾಯಣ್ ಒಂದಾಗಿ ಪ್ರಚಾರಕ್ಕಿಳಿದಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಲಾಭಧಾಯಕವೆಂದೇ ಹೇಳಲಾಗಿದೆ.

ABOUT THE AUTHOR

...view details