ಕರ್ನಾಟಕ

karnataka

ETV Bharat / state

ಗ್ರಾಮ ದೇವತೆ ಹಬ್ಬ ಆಚರಣೆ ವೇಳೆ ಗುಂಪು ಘರ್ಷಣೆ.. ಐವರಿಗೆ ಗಾಯ - ಮಾರಕಾಸ್ತ್ರ ಹಿಡಿದು ಹೊಡೆದಾಟ

ಗ್ರಾಮ ದೇವತೆ ಹಬ್ಬದಂದು ನೃತ್ಯ ಮಾಡುವಾಗ ಘರ್ಷಣೆ‌ಯುಂಟಾಗಿ, ಮಾತಿಗೆ ಮಾತು ಬೆಳೆದು ಯುವಕರು ಮಾರಕಾಸ್ತ್ರ ಹಿಡಿದು ಹೊಡೆದಾಡಿಕೊಂಡಿದ್ದಾರೆ‌. ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

temple
temple

By

Published : Mar 4, 2021, 3:32 PM IST

ಮೈಸೂರು:ಗ್ರಾಮ ದೇವತೆ ಹಬ್ಬದ ಆಚರಣೆ ವೇಳೆ ಗುಂಪು ಘರ್ಷಣೆಯುಂಟಾಗಿ, ಯುವಕರು ಹೊಡೆದಾಡಿಕೊಂಡು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮೈಸೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಗ್ರಾಮದಲ್ಲಿ ನಿನ್ನೆ ರಾತ್ರಿ ಗ್ರಾಮ ದೇವತೆ ಹಬ್ಬದಂದು ನೃತ್ಯ ಮಾಡುವಾಗ ಘರ್ಷಣೆ‌ಯುಂಟಾಗಿ, ಮಾತಿಗೆ ಮಾತು ಬೆಳೆದು ಎರಡೂ ಗುಂಪಿನ ಯುವಕರು ಮಾರಕಾಸ್ತ್ರ ಹಿಡಿದು ಹೊಡೆದಾಡಿಕೊಂಡಿದ್ದಾರೆ‌.

ಹಬ್ಬ ಆಚರಣೆ ವೇಳೆ ಗುಂಪು ಘರ್ಷಣೆ

ಘಟನೆಯಿಂದ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ತೆರಳಿದ ಪೊಲೀಸರು, ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಹಬ್ಬದ ವಾತಾವರಣ ಇದೀಗ ಗ್ರಾಮವನ್ನು ಮೌನಕ್ಕೆ ತಳ್ಳಿದೆ.

ಗ್ರಾಮಸ್ಥರು ರಾಜಿ ಮಾಡಿಕೊಳ್ಳಲು ಮುಂದಾದ ಪರಿಣಾಮ, ವರುಣಾ ಠಾಣಾ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ABOUT THE AUTHOR

...view details