ಕರ್ನಾಟಕ

karnataka

ಯಾರನ್ನ ಕೇಳಿ ರಾಜೀನಾಮೆ ಕೊಟ್ರಿ?... ಹಳ್ಳಿಹಕ್ಕಿಗೆ ಮತ್ತೆ ಕುಟುಕಿದ ಮತದಾರ

ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಮತದಾರರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

By

Published : Nov 25, 2019, 7:23 AM IST

Published : Nov 25, 2019, 7:23 AM IST

ಮತದಾರರಿಂದ ವಿಶ್ವನಾಥ್​ಗೆ ತರಾಟೆ

ಮೈಸೂರು:ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಮತದಾರರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಮತದಾರರಿಂದ ವಿಶ್ವನಾಥ್​ಗೆ ತರಾಟೆ

ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿ ಶ್ರವಣಹಳ್ಳಿ ಗ್ರಾಮಕ್ಕೆ ತೆರಳಿದ ವಿಶ್ವನಾಥ್ ಗೆ ಮತದಾರರು, ಯಾರನ್ನು ಕೇಳಿ ರಾಜೀನಾಮೆ ಕೊಟ್ರಿ, ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?‌ ನೀವು ಬಹಳ ನೋವು ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ಕಳುಹಿಸಿದ್ದಾರೆ.

ಅಲ್ಲಿಂದ ಕೋಳಘಟ್ಟಕ್ಕೆ ಹೋದ ವಿಶ್ವನಾಥ್ ಗೆ ಅಲ್ಲಿಯೂ ಮತದಾರರು ಪ್ರಶ್ನಿಸಿದ್ದಾರೆ. ಯಾಕೆ ನಿಮಗೆ ವೋಟು ಹಾಕಬೇಕು?‌ ಗೆದ್ದು ಹೋದ ನಂತರ ಇತ್ತ ತಿರುಗಿಯೂ ನೋಡಿಲ್ಲ.ಈಗ ಮತ ಕೇಳಲು ಬಂದಿದ್ದೀರಾ? ಎಂದು ಹೇಳುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು. ಈ ಎರಡು ಗ್ರಾಮಗಳಲ್ಲಿ ಹೆಚ್ಚು ಹೊತ್ತು ನಿಲ್ಲದ, ವಿಶ್ವನಾಥ್ ಅಲ್ಲಿಂದ ಕಾಲ್ಕಿತ್ತರು.

ABOUT THE AUTHOR

...view details