ಕರ್ನಾಟಕ

karnataka

ಹುಣಸೂರು ಉಪಚುನಾವಣೆಗೆ ಸಕಲ ಸಿದ್ಧತೆ: ಡಿಸಿಯಿಂದ ಮಾಹಿತಿ

ಹುಣಸೂರು ಉಪಚುನಾವಣೆಗೆ ಸಕಲ ಸಿದ್ಧತೆಯಾಗಿದ್ದು,10 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

By

Published : Nov 22, 2019, 11:41 PM IST

Published : Nov 22, 2019, 11:41 PM IST

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು: ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪೂರ್ವ ಸಿದ್ಧತೆ ನಿಮಿತ್ತ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಅಮರ್ ಖುಷ್ವ (ದೂರವಾಣಿ ಸಂಖ್ಯೆ: 7259813556) ಹಾಗೂ ವೆಚ್ಚ ವೀಕ್ಷಕರಾಗಿ ಉಪಿಂದರ್ ಬಿರ್ ಸಿಂಗ್ (ದೂರವಾಣಿ ಸಂಖ್ಯೆ: 7899831135) ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಹುಣಸೂರು ಉಪಚುನಾವಣೆಯಲ್ಲಿ ಒಟ್ಟು 21 ಅಭ್ಯರ್ಥಿಗಳಿಂದ 31 ನಾಮಪತ್ರ ಸ್ವೀಕೃತವಾಗಿದ್ದವು. 11 ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 10 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನೀಡಿದರು.

ಚುನಾವಣಾಧಿಕಾರಿಯಾಗಿ ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿಗಳಾದ ಎಸ್.ಪೂವಿತ ಅವರು (ದೂ.ಸಂಖ್ಯೆ: 9606137722) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹುಣಸೂರು ತಾಲೂಕಿನ ತಹಶೀಲ್ದಾರ್ ಬಸವರಾಜ್ ಐ.ಇ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದದಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, ಒಟ್ಟು 2,27,974 ಮತದಾರರಿದ್ದಾರೆ. 1,14,146 ಪುರಷ ಮತದಾರರು, 1,12,770 ಮಹಿಳಾ ಮತದಾರರು, 4 ಇತರ ಮತದಾರರು ಇದ್ದು, ಹೆಚ್ಚುವರಿಯಾಗಿ 434 ಪುರುಷ ಮತದಾರರು ಹಾಗೂ 618 ಮಹಿಳಾ ಮತದಾರರು, ಹಾಗೂ 6 ಇತರ ಮತದಾರರು ಸೇರ್ಪಡೆಯಾಗಿದ್ದು, ವಿಶೇಷ ಚೇತನ ಮತದಾರರು ಒಟ್ಟು 2,235 ಇದ್ದು ಹೊಸದಾಗಿ ಯಾರು ಸೇರ್ಪಡೆಯಾಗಿಲ್ಲ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಅಗತ್ಯವಾದ ಕನಿಷ್ಠ ಸೌಲಭ್ಯಗಳಾದ ಕುಡಿವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರ್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ಯಾಲೆಟ್ ಯುನಿಟ್ 329, ಕಂಟ್ರೋಲ್ ಯುನಿಟ್ 329 ಹಾಗೂ ವಿವಿಪ್ಯಾಟ್ 357 ಮತಯಂತ್ರಗಳನ್ನು ಹುಣಸೂರು ತಾಲೂಕಿನ ನಗರಸಭೆ ಕಾರ್ಯಾಲಯ ಕಟ್ಟಡ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದರು.

ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ನಡೆಸಲು ಚುನಾವಣಾ ವೀಕ್ಷಕರು, ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸಂಯುಕ್ತ ಆಶ್ರಯದಲ್ಲಿ ಸ್ಥಳ ಪರಿಶೀಲನೆ ಮಾಡಿ ಹುಣಸೂರಿನ ಶ್ರೀ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ನಡೆಸಲು ನಿಗದಿ ಮಾಡಲಾಗಿದೆ ಎಂದರು.

ಚುನಾವಣೆ ಸಂಬಂಧ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದ್ದು, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ : 1077/1950, ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08222-252073 ಹಾಗೂ ಹುಣಸೂರು ತಾಲೂಕು ಕಚೇರಿ ದೂರವಾಣಿ ಸಂಖ್ಯೆ: 08222-252040 ಗೆ ಕರೆ ಮಾಡಬಹುದು. 1950 ದೂರವಾಣಿ ಸಂಖ್ಯೆಗೆ ಈವರೆಗೂ ಒಟ್ಟು 94 ದೂರವಾಣಿ ಕರೆಗಳು ಸ್ವೀಕತವಾಗಿವೆ ಎಂದರು.

ಮನುಗನಹಳ್ಳಿ, ವೀರನಹೊಸಹಳ್ಳಿ( ಉಮ್ಮತ್ತೂರು, ಚಿಲ್ಕುಂದ, ಗಾವಡಗೆರೆ ( ಚಿಕ್ಕಾಡನಹಳ್ಳಿ) ಮುತ್ತುರಾಯನಹೊಸಹಳ್ಳಿ, ದೊಡ್ಡೇಕೊಪ್ಪಲು ಚೆಕ್‍ಪೋಸ್ಟ್‍ಗಳನ್ನು ಮಾಡಲಾಗಿತ್ತು. ಹೆಚ್ಚುವರಿಯಾಗಿ ಆಸ್ವಾಳು, ಶಾಂತಿಪುರ, ಶಿರೇನಹಳ್ಳಿಯಲ್ಲಿ ಚೆಕ್ ಪೋಸ್ಟ್​​​ಗಳನ್ನ ಮಾಡಲಾಗಿದೆ ಎಂದು ತಿಳಿಸಿದರು. ಚುನಾವಣೆ ಹಿನ್ನೆಲೆ ಒಟ್ಟು 9 ಚೆಕ್‍ಪೋಸ್ಟ್​ಗಳನ್ನ ತೆರೆಯಲಾಗಿದ್ದು, ಈಗಾಗಲೇ ಹಣ, ವಸ್ತುಗಳು ಮತ್ತು ಮದ್ಯ ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಒಟ್ಟು ಹಣ 6,35,300/- ಇದರಲ್ಲಿ 4,00,000/- ರೂ.ಗಳನ್ನು ವಾರಸುದಾರರ ದಾಖಲೆಗಳನ್ನು ಪರಿಶೀಲಿಸಿ ಹಿಂದಿರುಗಿಸಲಾಗಿದೆ. 1,37,00000/- ರೂ.ಗಳ ಮದ್ಯವಶಪಡಿಸಿಕೊಳ್ಳಲಾಗಿದೆ. ಹಾಗೂ 97,90,000/-ರೂ. ಮೌಲ್ಯದ ಪಾಂಪ್ಲೇಟ್, ಪಾತ್ರೆ, ಸೀರೆ ದ್ವಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರವಾಹನ, 4 ಟ್ಯಾಂಕರ್ಸ್‍ಗಳನ್ನು ವಶಪಡಿಸಿಕೊಂಡಿದ್ದು ಇದುವರೆಗೆ 40 ಎಫ್‍ಐಆರ್​​​​​​​ ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details