ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬಿಜೆಪಿ ಸೋತ ಹಿನ್ನೆಲೆ: ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಪ್ರತಾಪ್ ಸಿಂಹ - ಸಂಸದ ಪ್ರತಾಪ್ ಸಿಂಹ

ಕಾರ್ಯಕರ್ತರೇ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಟ್ವೀಟ್​ ಮಾಡುವ ಮೂಲಕ ಪ್ರತಾಪ್ ಸಿಂಹ ಕ್ಷಮೆ ಯಾಚಿಸಿದ್ದಾರೆ.

MP Pratap Simha
ಸಂಸದ ಪ್ರತಾಪ್ ಸಿಂಹ

By

Published : May 19, 2023, 4:34 PM IST

ಮೈಸೂರು : ಈ ಬಾರಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯೂ ಹೀನಾಯವಾಗಿ ಸೋತಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದ ಮೂಲಕ ಪಕ್ಷಕ್ಕಾಗಿ ಹಗಲಿರುಳೆನ್ನದೆ ದುಡಿದ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಹೊಂದಿತ್ತು.

ಇದನ್ನೂ ಓದಿ :ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ : ಆಕಾಂಕ್ಷಿಗಳು‌ ಯಾರ್ಯಾರು ?

ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಸಹ ಮನೆ ಮಠವನ್ನು ತ್ಯಜಿಸಿ , ಹಗಲಿರುಳೆನ್ನದೇ ದಿನವೆಲ್ಲ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದರು. ನಮ್ಮ ಪಕ್ಷದ ಕಾರ್ಯಕರ್ತರೇ ನಮಗೆ ಶಕ್ತಿ, ಗೆದ್ದಾಗ ಹೊತ್ತು ಮೆರೆಸುವವರು ಅವರಿಗೆ ಸೋತಾಗ ನಮ್ಮ ಮೇಲೆ ತೀಕ್ಷ್ಣವಾಗಿ ಸಿಟ್ಟನ್ನು ಹೊರಹಾಕುವ ಅಧಿಕಾರವೂ ಸಹ ಅವರಿಗಿದೆ ಎಂದು ಪ್ರತಾಪ್ ಸಿಂಹ ಟ್ವೀಟ್ ನಲ್ಲಿ ಹೇಳಿದ್ದಾರೆ.

ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತರೇ ಹೊರತು ನಾಯಕನಲ್ಲ :ಬಿಜೆಪಿ ಪಕ್ಷ ಸೋತಿರುವುದರಿಂದ ಅನಾಥರಾಗಿರುವುದು ನಮ್ಮ ಪಕ್ಷದ ಕಾರ್ಯಕರ್ತರುಗಳು ಮಾತ್ರ, ಯಾವುದೇ ನಾಯಕರು ಅನಾಥರಾಗಿಲ್ಲ. ಈ ಸೋಲಿನಿಂದ ಯಾವ ನಾಯಕನೂ ಅಪಾಯಕ್ಕೆ ಸಿಲುಕಿಲ್ಲ, ಅಪಾಯಕ್ಕೆ ಸಿಲುಕಿರುವುದು ಸಾಮಾನ್ಯ ಕಾರ್ಯಕರ್ತರು. ಕಾರ್ಯಕರ್ತರೇ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ :ಇವರು ರಾಜ್ಯದ ಏಕೈಕ ಉಪ್ಪಾರ ಶಾಸಕ: ಸೋಮಣ್ಣ ಸೋಲಿಸಿದ ಪುಟ್ಟರಂಗಶೆಟ್ಟಿಗೆ ಸಿಗಲಿದೆಯೇ ಮಂತ್ರಿಗಿರಿ?

ಯಾರದ್ದೋ ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಸೃಷ್ಟಿಯಾಗುವ ಷಡ್ಯಂತ್ರಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಯಾರು ಬಲಿಯಾಗಬಾರದು. ಯಾರದೋ ದ್ವೇಷಕ್ಕೆ ಬೇರೆ ಯಾರನ್ನೋ ತೆಗಳುವುದು ಬೇಡ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಕಾರ್ಯಕರ್ತರಲ್ಲಿ ಪ್ರತಾಪ್​ ಸಿಂಹ ಮನವಿ ಮಾಡಿದರು.

ಸೋಮಣ್ಣ ಬೆಂಬಲಕ್ಕೆ ನಿಂತಿದ್ದ ಪ್ರತಾಪ್​ ಸಿಂಹ :ಈ ಬಾರಿ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ನೂತನವಾಗಿ ಸಿಎಂ ಆಗಿ ಆಯ್ಕೆ ಆಗಿರುವ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯ ವಿರುದ್ದ ಸ್ಪರ್ಧೆ ಮಾಡಿದ್ದರು. ಹೈಕಮಾಂಡ್​​ ಹೇಳಿದಂತೆಯೇ ಸೋಮಣ್ಣ ಸ್ಪರ್ಧೆಗೆ ಸಿದ್ದರಾಗಿದ್ದರು. ಇವರಿಗೆ ಬೆನ್ನಿಂದೆ ನಿಂತು ಸಿದ್ದರಾಮಯ್ಯ ಸೋಲಿಸಲು ಪ್ರತಾಪ್​ ಸಿಂಹ ಸಂಪೂರ್ಣ ಬೆಂಬಲ ಕೊಡುವುದರ ಮೂಲಕ ಜೊತೆ ಜೊತೆಗೆ ಚುನಾವಣೆ ಪ್ರಚಾರ ಕೂಡ ಮಾಡಿದ್ದರು. ಆದರೇ ಚುನಾವಣೆಯಲ್ಲಿ ಸೋಮಣ್ಣ ಪರಾಜಿತ ಗೊಂಡರು.

ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರ ಬಂದ ಹಿನ್ನೆಲೆ : ಇಂದಿರಾ ಕ್ಯಾಂಟಿನ್​ನಲ್ಲಿ ಹೋಳಿಗೆ ಊಟ ಹಾಕಿ ಸಂಭ್ರಮಾಚರಣೆ

ABOUT THE AUTHOR

...view details