ಕರ್ನಾಟಕ

karnataka

By

Published : Mar 27, 2020, 12:01 AM IST

ETV Bharat / state

ಭಿಕ್ಷುಕರಿಗೆ ಆಹಾರ ಪೊಟ್ಟಣ ವಿತರಿಸಿದ ಪೊಲೀಸ್​

ಮೈಸೂರು ನಗರ ಸಂಪೂರ್ಣ ಸ್ತಬ್ಧಗೊಂಡ ಹಿನ್ನೆಲೆ ಭಿಕ್ಷುಕರಿಗೆ ಪೊಲೀಸರು ಆಹಾರ ಪೊಟ್ಟಣ ವಿತರಿಸಿ ಮಾನವೀಯತೆ ಮೆರೆದರು.

Police distributing food packets to beggars
ಭಿಕ್ಷುಕರಿಗೆ ಆಹಾರ ಪೊಟ್ಟಣ ವಿತರಿಸಿದ ಪೊಲೀಸ್​

ಮೈಸೂರು: ಕೊರೊನಾ ಸೋಂಕಿನ ಹಿನ್ನೆಲೆ ಎಲ್ಲ ವ್ಯಾಪಾರ - ವಹಿವಾಟಿನ ಸ್ತಬ್ಧವಾಗಿರುವ ಹಿನ್ನೆಲೆ ಆಹಾರವಿಲ್ಲದೇ ಕಂಗಾಲಾಗಿದ್ದ ಭಿಕ್ಷುಕರಿಗೆ ಪೊಲೀಸರು ತಮ್ಮ ವಾಹನದಲ್ಲಿ ಹೋಗಿ ಊಟ ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.

ಭಿಕ್ಷುಕರಿಗೆ ಆಹಾರ ಪೊಟ್ಟಣ ವಿತರಿಸಿದ ಪೊಲೀಸ್​

ನಗರದಲ್ಲಿ ಲಾಕ್​ಡೌನ್ ಎಫೆಕ್ಟ್​ನಿಂದ ಇಡೀ ನಗರವೇ ಸಂಪೂರ್ಣ ಬಂದ್ ಆಗಿತ್ತು. ಪೊಲೀಸ್​ ವಾಹನದಲ್ಲಿ ಆಹಾರ ಪೊಟ್ಟಣಗಳನ್ನು ಇಟ್ಟುಕೊಂಡು, ಅವಶ್ಯ ಇದ್ದವರಿಗೆ ವಿತರಿಸುತ್ತಿದ್ದರು. ಡಿಸಿಪಿ ಡಾ.ಪ್ರಕಾಶ್ ಗೌಡ ಸ್ವತಃ ರೈಲ್ವೆ ನಿಲ್ದಾಣಕ್ಕೆ ಹೋಗಿ, ಅಲ್ಲಿಯ ಭಿಕ್ಷುಕರಿಗೆ ಆಹಾರದ ಪೊಟ್ಟಣ ವಿತರಿಸಿದರು.

ಪೊಲೀಸರಿಗೆ ಮಾಸ್ಕ್​:ಶಾಸಕ ಎಸ್.ಎ.ರಾಮದಾಸ್ ಇಂದು ಲಕ್ಷ್ಮಿಪುರಂ ಸಂಚಾರಿ ಠಾಣೆ ಹಾಗೂ ಇತರ ಪೊಲೀಸರಿಗೆ ಮಾಸ್ಕ್​ಗಳನ್ನು ವಿತರಿಸಿದರು. ಜೊತೆಗೆ ಆಹಾರ ಪದಾರ್ಥಗಳನ್ನು ಪೊಲೀಸರಿಗೆ ನೀಡಿದರು.

ABOUT THE AUTHOR

...view details