ಕರ್ನಾಟಕ

karnataka

ETV Bharat / state

ಶಾಸಕ ತನ್ವೀರ್ ಸೇಠ್​​ಗೆ ಜೀವ ಬೆದರಿಕೆ: ಮೈಸೂರಿನಲ್ಲಿ ದೂರು ದಾಖಲು - complaint on death threat to MLA Tanveer Sait

ಶಾಸಕ ತನ್ವೀರ್ ಸೇಠ್​ಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮೂರು ಕಡೆ ದೂರು ದಾಖಲಿಸಲಾಗಿದೆ.

police-complaint-alleging-death-threat-to-mla-tanveer-sait
ಶಾಸಕ ತನ್ವೀರ್ ಸೇಠ್​​ಗೆ ಜೀವ ಬೆದರಿಕೆ: ಮೈಸೂರಿನಲ್ಲಿ ದೂರು ದಾಖಲು

By

Published : Nov 18, 2022, 10:43 AM IST

ಮೈಸೂರು:ಶಾಸಕ ತನ್ವೀರ್ ಸೇಠ್​ಗೆ ಜೀವ ಬೆದರಿಕೆ ಇದೆ ಎಂದು ಮೈಸೂರಿನಲ್ಲಿ ಮೂರು ಕಡೆ ದೂರು ದಾಖಲಿಸಲಾಗಿದೆ. ಮೈಸೂರಿನ ಉದಯಗಿರಿ ಮತ್ತು ಮಂಡಿ ಪೊಲೀಸ್ ಠಾಣೆ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರಿಗೆ ಕಾಂಗ್ರೆಸ್ ಬ್ಲಾಕ್ ಸಮಿತಿಯಿಂದ ದೂರು ನೀಡಲಾಗಿದೆ.

ಹಾಸನದಲ್ಲಿ ನಡೆದ ಭಜರಂಗದಳ ಕಾರ್ಯಕ್ರಮದಲ್ಲಿ ರಘು ಸಕಲೇಶಪುರ ಅವರು ಶಾಸಕರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಟಿಪ್ಪು ಪ್ರತಿಮೆ ಸ್ಥಾಪಿಸುವ ಕನಸು ಬಿಡದಿದ್ದರೆ ಕೊಲೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್​ ಬ್ಲಾಕ್ ಸಮಿತಿ ಆರೋಪಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

2019ರಲ್ಲಿ ಬನ್ನಿ ಮಂಟಪದ ಬಳಿ ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಹಲ್ಲೆಯಲ್ಲಿ ಎನ್‌.ಆರ್. ಕ್ಷೇತ್ರದ ಭಜರಂಗದಳದ ಕಾರ್ಯಕರ್ತ ಗಿರಿಧರ್​​ಗೂ ಸಂಬಂಧವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪನೆಗೆ ಚಿಂತನೆ: ಶಾಸಕ ತನ್ವೀರ್ ಸೇಠ್

ABOUT THE AUTHOR

...view details