ಕರ್ನಾಟಕ

karnataka

ETV Bharat / state

ಹಾಡಹಗಲೇ ನಿವೃತ್ತ ಶಿಕ್ಷಕಿಯ ಸರ ಕದ್ದ ಖದೀಮ ಅಂದರ್​: ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಮೈಸೂರಲ್ಲಿ ಸರಗಳ್ಳನ ಬಂಧನ

ಹಾಡಹಗಲೇ ನಿವೃತ್ತ ಶಿಕ್ಷಕಿಯ ಸರ ಕದ್ದ ಖದೀಮನನ್ನು ಮೈಸೂರಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Police arrest chain snatcher in Mysore
ಮೈಸೂರಲ್ಲಿ ಸರಗಳ್ಳನ ಬಂಧನ

By

Published : Jan 15, 2022, 11:00 PM IST

ಮೈಸೂರು:ನಿವೃತ್ತ ಶಿಕ್ಷಕಿಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.

ಮೈಸೂರಲ್ಲಿ ಸರಗಳ್ಳನ ಬಂಧನ

ನಗರದ ರಾಮಕೃಷ್ಣ ಬಡವಾಣೆಯ ನಿವೃತ್ತ ಶಿಕ್ಷಕಿ ಗೀತಾ ಶನಿವಾರ ಮಧ್ಯಾಹ್ನ ಬಡವಾಣೆಯ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಆಕೆಯನ್ನು ಹಿಂಬಾಲಿಸಿದ ಖದೀಮ, ಅವರ ಕತ್ತಿನಿಂದ ಸರ ಕದ್ದು ಪರಾರಿಯಾಗಿದ್ದನು. ಈ ವೇಳೆ ಆತನ ಜೇಬಿನಿಂದ ಮೊಬೈಲ್ ಬಿದ್ದುಹೋಗಿತ್ತು.

ಘಟನೆ ಸಂಬಂಧ ಶಿಕ್ಷಕಿ ಗೀತಾ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಮೊಬೈಲ್ ಆಧಾರದ ಮೇಲೆ ಸರಗಳ್ಳನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ವಕೀಲನ ಮನೆಗೆ ವೈದ್ಯನಿಂದ ವಾಮಾಚಾರ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details