ಕರ್ನಾಟಕ

karnataka

ETV Bharat / state

ಹೋಟೆಲ್​ಗೆ ದಿಢೀರ್​ ನುಗ್ಗಿದ ಕಾರು: ಟೀ ಕುಡಿಯುತ್ತಿದ್ದ ವೃದ್ಧ ಸ್ಥಳದಲ್ಲೇ ಸಾವು - ಮೈಸೂರಿನಲ್ಲಿ ಕಾರು ಅಪಘಾತ ವೃದ್ಧ ಸಾವು

ಅಂಗಡಿ ಮುಂದೆ ಕುಳಿತಿದ್ದ ವೃದ್ಧನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

old man death in car accident in mysore
ಕಾರು ಅಪಘಾತ ವೃದ್ಧ ಸಾವು

By

Published : Nov 25, 2020, 8:14 AM IST

ಮೈಸೂರು: ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ, ಮನೆಯ ಅಂಗಡಿ ಮುಂದೆ ಕುಳಿತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ, ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಕಾರು ಅಪಘಾತ ವೃದ್ಧ ಸಾವು

ಬೆಳವಾಡಿ ಗ್ರಾಮದ ಕೆಂಪ ಜೋಗೇಗೌಡ(60) ಕಾರು ಚಾಲಕನ ನಿರ್ಲಕ್ಷ್ಯದಿಂದ ಮೃತಪಟ್ಟ ವೃದ್ಧ. ಅಂಗಡಿ ಮುಂದೆ ಕುಳಿತಿದ್ದ ವೃದ್ಧನಿಗೆ ಕಾರು ಚಾಲಕ ಪ್ರವೀಣ್ ಎಂಬಾತ ಡಿಕ್ಕಿ ಹೊಡೆದು, ಅಲ್ಲಿಂದ ಪರಾರಿಯಾಗಿದ್ದಾನೆ.

ಓದಿ: ಪತ್ನಿಯನ್ನು ನೋಡಲು ಬಂದ ಪತಿಯ ಬರ್ಬರ ಹತ್ಯೆ: ಕಾರಣ ನಿಗೂಢ!

ಅಪಘಾತವೆಸಗಿದ ಪ್ರವೀಣ್ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಬಂಧಿಸುವಂತೆ ಮೃತರ ಕುಟುಂಬದವರ ಪೊಲೀಸರಿಗೆ ಒತ್ತಾಯಿಸಿದರು. ಸ್ಥಳಕ್ಕೆ ವಿ.ವಿ ಪುರಂ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ‌ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details