ಕರ್ನಾಟಕ

karnataka

ETV Bharat / state

ಮೈಸೂರು: ದುಡ್ಡು ಕೊಟ್ಟರೆ ರಾಗಿ ಖರೀದಿ, ಅಧಿಕಾರಿಗಳ ಕಳ್ಳಾಟಕ್ಕೆ ರೈತರು ಕಂಗಾಲು - officers demanding money from farmers in mysore

ರೈತರಿಂದ ರಾಗಿ ಬೆಳೆ ಖರೀದಿಸಲು ಹಣ ವಸೂಲಿ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿದ್ದು, ಈ ದೃಶ್ಯವನ್ನು ರೈತರೊಬ್ಬರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ.

officers-demanding-money-to-buy-the-crops-from-farmers
ಮೈಸೂರು: ದುಡ್ಡು ಕೊಟ್ಟರೆ ರಾಗಿ ಖರೀದಿ, ಅಧಿಕಾರಿಗಳ ಕಳ್ಳಾಟಕ್ಕೆ ರೈತರು ಕಂಗಾಲು

By

Published : May 28, 2022, 5:48 PM IST

ಮೈಸೂರು: ರೈತರು ತಾವು ಬೆಳೆದ ಬೆಳೆಯನ್ನು ಸರ್ಕಾರ ಖರೀದಿ ಮಾಡಲು ಸಹಕರಿಸುತ್ತದೆ ಜೊತೆಗೆ ಬೆಂಬಲ ಬೆಲೆಯನ್ನು ನೀಡುತ್ತದೆ ಎಂದು ನಂಬುತ್ತಾರೆ. ಆದರೆ, ಈ ಅಧಿಕಾರಿಗಳು ರೈತರಿಂದ ಹಣ ಕೀಳಲು ಮುಂದಾಗಿದ್ದಾರೆ. ರೈತರಿಂದ ನಿರ್ದಿಷ್ಟ ಪ್ರಮಾಣದ ಬೆಳೆ ಖರೀದಿಸಲು ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ಘಟನೆ ವರದಿಯಾಗಿದೆ.

ದುಡ್ಡು ಕೊಟ್ಟರೆ ಮಾತ್ರ ರಾಗಿ ಖರೀದಿ ಅಧಿಕಾರಿಗಳ ಕಳ್ಳಾಟಕ್ಕೆ ರೈತರು ಕಂಗಾಲು

ರೈತರಿಂದ ಹಣ ವಸೂಲಿ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿದ್ದು, ಈ ದೃಶ್ಯವನ್ನು ರೈತರೊಬ್ಬರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ. ರೈತರಿಂದ ಒಂದು ಲೋಡ್ ರಾಗಿ ಖರೀದಿಸಲು, ಅಧಿಕಾರಿಗಳು 2 ಸಾವಿರ ರೂ. ವಸೂಲಿ ಮಾಡುತ್ತಿರುವುದಾಗಿ ಹೇಳಲಾಗಿದೆ. ಸದ್ಯ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿರುವಾಗ ಅಧಿಕಾರಿಗಳು ರೈತರಿಂದ ಬೆಳೆ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸುವಂತೆ ಹೇಳುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.

ಓದಿ :ಸೋಲಿನ ಇತಿಹಾಸ ಬೇಡ, ಗೆಲುವಿನ ಇತಿಹಾಸ ಹೇಳಬೇಕಿದೆ: ಸಚಿವ ಬಿ.ಸಿ. ನಾಗೇಶ

ABOUT THE AUTHOR

...view details