ಕರ್ನಾಟಕ

karnataka

ETV Bharat / state

ಮೈಸೂರು: ಹೂಳಲು ಸ್ಥಳವಿಲ್ಲ, ಶವ ಸಾಗಿಸಲು ದಾರಿಯೂ ಇಲ್ಲ! - ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ

ಸ್ವಾತಂತ್ರ್ಯ ಬಂದು 75ವರ್ಷಗಳೇ ಕಳೆದಿವೆ. ಆದರೂ, ಇನ್ನೂ ಅನೇಕ ಗ್ರಾಮಗಳಲ್ಲಿ ಶವ ಹೂಳಲು ಸ್ಮಶಾನವಿಲ್ಲ, ಹೆಣ ಸಾಗಿಸಲು ಸೂಕ್ತ ರಸ್ತೆಯೂ ಇಲ್ಲ. ಇಂತಹದ್ದೇ ಘಟನೆ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

no proper road and proper place for cemetery
ಹೂಳಲು ಸ್ಥಳವಿಲ್ಲ, ಶವ ಸಾಗಿಸಲು ದಾರಿ ಇಲ್ಲ!

By

Published : Nov 9, 2022, 4:02 PM IST

ಮೈಸೂರು: ಕಾಲುವೆ ದಾಟಿ, ಹೊಂಡ, ಗುಂಡಿ ಹತ್ತಿಳಿದು, ಕೆಸರು ಗದ್ದೆಯಂತಹ ರಸ್ತೆಯಲ್ಲಿ ಶವ ಹೊತ್ತೊಯ್ಯಬೇಕಾದ ದುಸ್ಥಿತಿ ಟಿ.ನರಸೀಪುರ ತಾಲೂಕಿನ ಮಾರನಪುರ ಗ್ರಾಮದಲ್ಲಿ ನಡೆದಿದೆ. ಈ ಸಮಸ್ಯೆಯಿಂದ ಬೇಸತ್ತಿರುವ ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಗರಂ ಆಗಿದ್ದಾರೆ.

ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸುಸಜ್ಜಿತವಾದ ರಸ್ತೆಯ ವ್ಯವಸ್ಥೆ ಇಲ್ಲದಿರುವ ಕಾರಣ ಜನರು ಮೈಲಿಗಟ್ಟಲೆ ಶವವನ್ನು ಹೊತ್ತುಕೊಂಡು ಹಳ್ಳ ಕೊಳ್ಳಗಳನ್ನು ದಾಟಿ ಸ್ಮಶಾನಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ‌.

ಹೂಳಲು ಸ್ಥಳವಿಲ್ಲ, ಶವ ಸಾಗಿಸಲು ದಾರಿ ಇಲ್ಲ!

ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಪಡಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಸಂಸದರ ನಿಧಿ ಹಣ ದುರ್ಬಳಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ABOUT THE AUTHOR

...view details