ಕರ್ನಾಟಕ

karnataka

ETV Bharat / state

ಬಜೆಟ್ ಮಂಡನೆ: ರಾಘವೇಂದ್ರ ಸ್ವಾಮಿ ಮಠಕ್ಕೆ ಬಿಎಸ್​ವೈ ಭೇಟಿ - BS Yediyurappa's Budget

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಮುಖ್ಯಮಂತ್ರಿ ಬಿಎಸ್​ವೈ ಬಜೆಟ್ ಮಂಡನೆ ಮಾಡುತ್ತಿದ್ದು, ಇದಕ್ಕೂ ಮುಂಚಿತವಾಗಿ ಅವರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದಾರೆ.

Yediyurappa visits Raghavendra Swamy Math
Yediyurappa visits Raghavendra Swamy Math

By

Published : Mar 8, 2021, 11:50 AM IST

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು 8ನೇ ಬಜೆಟ್ ಮಂಡನೆ ಮಾಡಲಿದ್ದು, ಮಹಿಳಾ ದಿನಾಚರಣೆ ದಿನವೇ ಆಯವ್ಯಯ ಮಂಡನೆ ಮಾಡುತ್ತಿರುವುದು ವಿಶೇಷವಾಗಿದೆ.

ಕೊರೊನಾ ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿಎಸ್​ವೈ ಬಜೆಟ್ ಮಂಡನೆ ಮಾಡುತ್ತಿರುವುದು, ಮಧ್ಯಾಹ್ನ 12:05ರ ಅಭಿಜಿತ ಮುಹೂರ್ತದಲ್ಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ. ಬಿಎಸ್​​ವೈ ಮಂಡನೆ ಮಾಡಲಿರುವ ಬಜೆಟ್​​ ಮೇಲೆ ಜನರದ್ದೂ ಬೆಟ್ಟದಷ್ಟು ನೀರಿಕ್ಷೆಗಳಿದ್ದು, ಈಗಾಗಲೇ ಸಿಎಂ ತಿಳಿಸಿರುವ ಪ್ರಕರಣ ಈ ಸಲದ ಬಜೆಟ್​ ಈ ಹಿಂದಿನ ಬಜೆಟ್​ಗಿಂತಲೂ ದೊಡ್ಡ ಗಾತ್ರದಲ್ಲಿದೆ ಎಂದಿದ್ದಾರೆ. ​

ಇದನ್ನೂ ಓದಿ: ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ

ಬಜೆಟ್ ಮಂಡನೆಗೂ ಮುಂಚಿತವಾಗಿ ಮುಖ್ಯಮಂತ್ರಿ ಬಿಎಸ್​​ವೈ ನಂಜನಗೂಡಿನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ABOUT THE AUTHOR

...view details