ಕರ್ನಾಟಕ

karnataka

ETV Bharat / state

ಮೈಸೂರು ಗ್ರಂಥಾಲಯ ಸುಟ್ಟ ಪ್ರಕರಣ.. ದಾನಿಗಳಿಗೆ ಹಣ ವಾಪಸ್​ ನೀಡಲು ಮುಂದಾದ ಮೀಸ್ಬಾ - ಮೈಸೂರು ಗ್ರಂಥಾಲಯ ಸುಟ್ಟ ಪ್ರಕರಣ,

ಮೈಸೂರಿನಲ್ಲಿ ಸೈಯದ್​ ಇಸಾಕ್​ ಅವರ ಉಚಿತ ಗ್ರಂಥಾಲಯ ಸುಟ್ಟು ಕರಕಲವಾಗಿತ್ತು. ಈ ಗ್ರಂಧಾಲಯ ಮರು ನಿರ್ಮಾಣ ಮಾಡಲು ದಾನಿಗಳು ಧಾವಿಸಿದ್ದರು. ಈಗ ಸರ್ಕಾರದಿಂದಲೇ ಗ್ರಂಥಾಲಯ ಮರು ನಿರ್ಮಾಣ ಮಾಡಲು ಮುಂದಾಗಿದ್ದು, ದಾನಿಗಳಿಗೆ ಹಣ ವಾಪಸ್​ ನೀಡಲು ಮೀಸ್ಬಾ ಮುಂದಾಗಿದ್ದಾರೆ.

Mysore library burn, Mysore library burn issue, Mysore library burn news, Fatehin Misbah think about money return to donors, ದಾನಿಗಳಿಗೆ ಹಣ ವಾಪಸ್, ದಾನಿಗಳಿಗೆ ಹಣ ವಾಪಸ್ ನೀಡಲು ಮುಂದಾದ ಫತೇನ್​ ಮಿಸ್ಬ, ಮೈಸೂರು ಗ್ರಂಥಾಲಯ ಸುಟ್ಟ ಪ್ರಕರಣ, ಮೈಸೂರು ಗ್ರಂಥಾಲಯ ಸುಟ್ಟ ಪ್ರಕರಣ ಸುದ್ದಿ,
ದಾನಿಗಳಿಗೆ ಹಣ ವಾಪಸ್​ ನೀಡಲು ಮುಂದಾದ ಮೀಸ್ಬ

By

Published : Apr 21, 2021, 2:48 PM IST

ಮೈಸೂರು:ಕಳೆದ 2 ವಾರದ ಹಿಂದೆ ಸೈಯದ್ ಇಸಾಕ್ ಎಂಬುವವರ ಸಾರ್ವಜನಿಕ ಉಚಿತ ಗ್ರಂಥಾಲಯವು ಮೈಸೂರಿನ ರಾಜೀವ್ ನಗರದಲ್ಲಿ ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಬೂದಿಯಾಗಿತ್ತು. ಇದೇ ಸಂದರ್ಭದಲ್ಲಿ ಹಲವು ಜನರು ಈ ಗ್ರಂಥಾಲಯ ನಿರ್ಮಾಣಕ್ಕೆ ಎಂದು ಸುಮಾರು 29 ಲಕ್ಷ ರೂ. ಹಣವನ್ನು ದಾನಿಗಳು ನೀಡಿದ್ದರು. ಆದರೆ, ಈಗ ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರವೇ ಮುಂದಾಗಿರುವ ಕಾರಣ ದಾನಿಗಳು ನೀಡಿರುವ ಹಣ ವಾಪಸ್ ನೀಡುಲಾಗುವುದು ಎಂದು ಫತೇನ್ ಮೀಸ್ಬಾ ತಿಳಿಸಿದ್ದಾರೆ.

ದಾನಿಗಳಿಗೆ ಹಣ ವಾಪಸ್​ ನೀಡಲು ಮುಂದಾದ ಮೀಸ್ಬ

ಗ್ರಂಥಾಲಯವು ಸುಟ್ಟು ಹೋದ ಪರಿಣಾಮ, ಅದರ ಮರು ನಿರ್ಮಾಣಕ್ಕೆ ಎಂದು ಮೈಸೂರಿನ ಜನತೆ ಹಾಗೂ ಸೈಯದ್ ಇಸಾಕ್ ಅವರ ಅಭಿಪ್ರಾಯದ ನಡುವೆ ಫತೇನ್ ಮೀಸ್ಬಾ ಎಂಬುವವರು ಕೆಟ್ಟೊ ವೆಬ್ ತಾಣದಲ್ಲಿ ಕ್ರಾಡ್ ಫಂಡಿಂಗ್ ಒಂದು ಪ್ರತ್ಯೇಕ ಖಾತೆಯನ್ನು ತೆಗೆದಿದ್ದರು. ಈ ಮೂಲಕ ಗ್ರಂಥಾಲಯ ನಿರ್ಮಾಣಕ್ಕೆ ಹಣ ಸಂಗ್ರಹಣೆಯನ್ನು ದಾನಿಗಳ ಮೂಲಕ 29 ಲಕ್ಷ. ಹಣ ಸಂಗ್ರಹಿಸಲಾಗಿತ್ತು.

ದಾನಿಗಳಿಗೆ ಹಣ ವಾಪಸ್​ ನೀಡಲು ಮುಂದಾದ ಮೀಸ್ಬ

ಆದರೆ, ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಮಹಾನಗರ ಪಾಲಿಕೆ‌ ಹಾಗೂ ಗ್ರಂಥಾಲಯ ನಿರ್ದೇಶನಾಲವು ಗ್ರಂಥಾಲಯ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ ಫತೇನ್ ಮೀಸ್ಬಾ ಅವರು ದಾನಿಗಳಿಂದ ಸಂಗ್ರಹವಾದ ಹಣವನ್ನು ವಾಪಸ್ ಮಾಡಲು ನಿರ್ಧರಿಸಿದ್ದಾಗಿ ತಮ್ಮ ಟ್ವಿಟರ್​ನಲ್ಲಿ‌ ತಿಳಿಸಿದ್ದಾರೆ.

ABOUT THE AUTHOR

...view details