ಕರ್ನಾಟಕ

karnataka

By

Published : May 3, 2020, 10:13 PM IST

ETV Bharat / state

ಮೈಸೂರು ರೆಡ್ ​ಝೋನ್​​ನಲ್ಲಿದೆ, ದಯವಿಟ್ಟು 'ಬಾರ್'​ ಬಾಗಿಲು ತೆರೆಯುವುದು ಬೇಡ: ಸ್ಥಳೀಯರ ಒತ್ತಾಯ

ಮೈಸೂರು ಜಿಲ್ಲೆ ಸಂಪೂರ್ಣ ರೆಡ್​ ಝೋನ್​ನಲ್ಲಿರುವುದರಿಂದ ಮತ್ತೆ ಸಮಸ್ಯೆಗಳು ಎದುರಾಗಲಿದ್ದು, ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗುವವರೆಗೆ ಬಾರ್​ ಬಾಗಿಲನ್ನು ತೆರೆಯದಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Mysore is in the Red Zone Please do not open the bar protest by locals
ಮೈಸೂರು ರೆಡ್​ಝೋನ್​​ನಲ್ಲಿದೆ ದಯವಿಟ್ಟು 'ಬಾರ್'​ ಬಾಗಿಲು ತೆರೆಯುವುದು ಬೇಡ

ಮೈಸೂರು: ಲಾಕ್‌ಡೌನ್ ಸಂಪೂರ್ಣವಾಗಿ ಮುಗಿಯುವವರೆಗೆ ಬಾರ್ ಬಾಗಿಲು​​ ತೆರೆಯಬಾರದು ಎಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಸುಣ್ಣದಕೇರಿಯಲ್ಲಿ ನಡೆದಿದೆ.

ಜಿಲ್ಲೆ ರೆಡ್ ಝೋನ್​ನಲ್ಲಿರುವುದರಿಂದ ಮತ್ತೆ ಸಮಸ್ಯೆಗಳು ಎದುರಾಗಲಿದ್ದು, ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗುವವರೆಗೆ ಹಾಗೂ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸುವವರೆಗೂ ಬಾರ್ ತೆರೆಯಬಾರದು ಎಂದು ಆಗ್ರಹಿಸಿದ್ದಾರೆ.

ಮೈಸೂರು ರೆಡ್ ​ಝೋನ್​​

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ಸರ್ಕಾರದ ಸೂಚನೆಯಂತೆ ಬಾರ್‌ಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ ಬಾರ್ ಮಾಲೀಕರ ಪಾತ್ರವಿಲ್ಲವೆಂದು ತಿಳಿಹೇಳಿದರು. ಆದರೆ, ಇವರ ಮಾತಿಗೆ ಕಿಂಚಿತ್ತೂ ಯುವಕರು ಬೆಲೆ ಕೊಡದ ಕಾರಣ ಕೊನೆಗೆ ಠಾಣೆಗೆ ಕರೆದೊಯ್ಯಲಾಯಿತು.

ABOUT THE AUTHOR

...view details