ಕರ್ನಾಟಕ

karnataka

ETV Bharat / state

ಮೈಸೂರು ಜಿಲ್ಲೆ ಈಗ ರೆಡ್​​ ಝೋನ್​ ಏರಿಯಾ: ಪಾಲಿಕೆಯ ವೈದ್ಯಾಧಿಕಾರಿ ಏನಂತಾರೆ?

ಮೈಸೂರು ಜಿಲ್ಲೆಯನ್ನು ಈಗ ರೆಡ್​​ ಝೋನ್​ ಎಂದು ಘೋಷಿಸಲಾಗಿದ್ದು, ಇಲ್ಲಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಪಾಲಿಕೆಯ ವೈದ್ಯಾಧಿಕಾರಿ ಡಾ. ನಾಗರಾಜ್ ವಿವರಿಸಿದ್ದಾರೆ.

By

Published : Apr 25, 2020, 4:34 PM IST

Mysore District is now the Red Zone Area
ಪಾಲಿಕೆಯ ವೈದ್ಯಾಧಿಕಾರಿ ಡಾ. ನಾಗರಾಜ್

ಮೈಸೂರು: ಕೊರೊನಾದ ಹಾಟ್​​ಸ್ಪಾಟ್ ಆಗಿರುವ ಜಿಲ್ಲೆಯನ್ನು ಈಗ ರೆಡ್ ಝೋನ್ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆ ನಗರದ 12 ಏರಿಯಾ ಹಾಗೂ ನಂಜನಗೂಡಿನ ಕೆಲವು ಪ್ರದೇಶಗಳನ್ನು ಕಂಟೈನ್ಮೆಂಟ್​ ಝೋನ್​ ಎಂದು ಪರಿವರ್ತಿಸಲಾಗಿದ್ದು, ಅಲ್ಲಿ ಯಾವ ರೀತಿ ನಿರ್ಬಂಧ ಇರುತ್ತದೆ ಎಂಬ ಬಗ್ಗೆ ಪಾಲಿಕೆಯ ವೈದ್ಯಾಧಿಕಾರಿ ಡಾ. ನಾಗರಾಜ್ ವಿವರಿಸಿದ್ದಾರೆ.

ಜಿಲ್ಲಾಧಿಕಾರಿ ನಿರ್ದೇಶನದಂತೆ ಈಗಾಗಲೇ ಕಂಟೈನ್ಮೆಂಟ್ ಝೋನ್​ಗಳನ್ನು ಗುರುತಿಸಿಕೊಳ್ಳಲಾಗಿದೆ. ಅಲ್ಲಿ ಸಿಂಗಲ್ ಎಂಟ್ರಿ ಮತ್ತು ಸಿಂಗಲ್ ಎಕ್ಸಿಟ್​ ಮಾಡಿ ಪಾಸಿಟಿವ್​​ ಮನೆಯಿದ್ದ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು​ ಕಂಟೈನ್ಮೆಂಟ್ ಝೋನ್ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ಬರುವಂತಹ ಎಲ್ಲಾ ಬೀದಿಗಳಿಗೆ ಬ್ಯಾರಿಕೇಡ್​​ ಹಾಕಲಾಗಿದೆ. ಯಾವುದೇ ವಾಹನವಾಗಲಿ ಹಣ್ಣು, ತರಕಾರಿ, ಹಾಲು ಕೊಡುವ ಪರಿಸ್ಥಿತಿ ಇದ್ದರೆ ಅವರು ಈ ಸಿಂಗಲ್ ಎಂಟ್ರಿ ಮೂಲಕ ಹೋಗಬೇಕು.

ಪಾಲಿಕೆಯ ವೈದ್ಯಾಧಿಕಾರಿ ಡಾ. ನಾಗರಾಜ್

ಹೋಗುವಾಗ ಮತ್ತು ಹೋಗಿ ಬಂದ ಮೇಲೆ ಸ್ಯಾನಿಟೈಸರ್​​ ಉಪಯೋಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ಆರೋಗ್ಯ ಇಲಾಖೆಯಿಂದ ಸರ್ವೇ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಹೊಸ ಕೇಸ್​ ಬಂದಿಲ್ಲ. ಒಂದು ವೇಳೆ ಕೇಸ್ ಪತ್ತೆಯಾದರೆ ಟೆಸ್ಟಿಂಗ್ ಮಾಡಿಸಲಾಗುತ್ತಿದೆ ಎಂದು ಕಂಟೈನ್ಮೆಂಟ್​​ ಝೋನ್​​ಗಳಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು.

ABOUT THE AUTHOR

...view details