ಕರ್ನಾಟಕ

karnataka

ETV Bharat / state

ಮೈಸೂರು: ಪತಿ ಬುದ್ಧಿ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆ - Mysore a wife commits suicide news

ಮಕ್ಕಳು ಗಲಾಟೆ ಮಾಡುತ್ತಿದ್ದಾಗ ಅವರನ್ನು ಸಮಾಧಾನ ಮಾಡುವಂತೆ ಪತಿ ಅಭಿಷೇಕ್ ಪತ್ನಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

wife commits suicide
ಪತಿ ಬುದ್ಧಿ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆ

By

Published : Feb 24, 2021, 5:18 PM IST

ಮೈಸೂರು:ಪತಿ ಬುದ್ಧಿ ಹೇಳಿದ್ದಕ್ಕೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ‌ ನಗರದಲ್ಲಿ ನಡೆದಿದೆ.

ಮೈಸೂರಿನ ವಿಜಯನಗರ ಬಡಾವಣೆ 4ನೇ ಹಂತದ ನಿವಾಸಿ ಅಭಿಷೇಕ್ ಎಂಬುವರ ಪತ್ನಿ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕಮಗಳೂರಿನ ನಿವಾಸಿಯಾದ ನಂದಿನಿ, 5 ವರ್ಷಗಳ ಹಿಂದೆ ಮೈಸೂರಿನ ಅಭಿಷೇಕ್​ನನ್ನು​ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು.

ಓದಿ:ಮೇಯರ್​​​​ಗೆ ಮುತ್ತು ಕೊಟ್ಟು ಖುಷಿ ಪಟ್ಟ ಮಾದೇಗೌಡ: ವಿಡಿಯೋ

ಕೆ-ಸೆಟ್ ಪರೀಕ್ಷೆಗೆ ಪ್ರಿಪೇರ್ ಆಗುತ್ತಿದ್ದ ಈಕೆ, ಮಕ್ಕಳು ಗಲಾಟೆ ಮಾಡುತ್ತಿದ್ದಾಗ ಅವರನ್ನು ಸಮಾಧಾನ ಮಾಡುವಂತೆ ಪತಿ ಅಭಿಷೇಕ್ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಬೇಸತ್ತ ನಂದಿನಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details