ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಸಾಮಾಜಿಕ ಸಂಘಟನೆಯ ಸ್ನೇಹಿತರ ಗುಂಪು ನೆರವೇರಿಸಿ, ಮಾನವ ಧರ್ಮದ ಸಂದೇಶವನ್ನು ಸಾರಿದ್ದಾರೆ.
ನಗರದ ಕೆಸರೆಯ ನಿವಾಸಿಯಾದ ಲಿಂಗಣ್ಣ (65) ಇವರು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ. ಆದರೆ ಅವರ ಅಂತ್ಯಕ್ರಿಯೆ ನಡೆಸಲು ಶಕ್ತವಲ್ಲದ ಕುಟುಂಬಸ್ಥರು ದಾರಿ ಕಾಣದಂತಾಗಿದ್ದರು. ಪರಿಚಿತರೊಬ್ಬರು ಮುಸ್ಲಿಂ ಸಂಘಟನೆಯ ಸಹಕಾರ ಕೇಳಿದ್ದಾರೆ. ಮೊದಲಿಗೆ ಹಣ ನೀಡಿದ ಸಂಘಟನೆಯವರು, ಕುಟುಂಬದ ಸ್ಥಿತಿಯನ್ನು ಕಂಡು ತಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಗಣೇಶ ನಗರದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.