ಕರ್ನಾಟಕ

karnataka

ಯುವ ಉದ್ಯಮಿ ಕೊಲೆ‌ ಪ್ರಕರಣ: 7 ಮಂದಿ ಆರೋಪಿಗಳ ಬಂಧನ

By

Published : Jun 22, 2020, 5:25 PM IST

ಮೈಸೂರಿನಲ್ಲಿ ಜೂನ್​ 17ರಂದು ಯುವ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಪಡೆದಿದ್ದರೆನ್ನಲಾದ 7 ಜನ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ವೃತ್ತಿ ವೈಷಮ್ಯದಿಂದ ಯುವ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ
ವೃತ್ತಿ ವೈಷಮ್ಯದಿಂದ ಯುವ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ

ಮೈಸೂರು: ವೃತ್ತಿ ವೈಷಮ್ಯದಿಂದ ಯುವ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಪಡೆದಿದ್ದ 7 ಜನ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ತಿಂಗಳ 17ನೇ ತಾರೀಖು ಬೆಳಗ್ಗೆ 10:30ಕ್ಕೆ ಯುವ ಉದ್ಯಮಿ ಅಶ್ರಿತ್ ಎಂಬ ವ್ಯಕ್ತಿ ವಿಜಯನಗರದ 4ನೇ ಹಂತದಲ್ಲಿ ಟೀ ಕುಡಿಯಲು ಬೈಕ್​ನಲ್ಲಿ ಬರುತ್ತಿದ್ದ. ಈ ವೇಳೆ ಆತನ ಬೈಕಿಗೆ ಡಿಕ್ಕಿ ಹೊಡೆದು ಆರೋಪಿಗಳು ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು, ಆರೋಪಿಗಳ ಪತ್ತೆಗಾಗಿ 2 ತಂಡ ರಚಿಸಿದ್ದರು.

ಕೊಲೆಯಾದ ಯುವ ಉದ್ಯಮಿ

ವೃತ್ತಿ ವೈಷಮ್ಯದಿಂದ ಸುಪಾರಿ:

ಕೊಲೆಯಾದ ಅಶ್ರಿತ್ ಈ ಹಿಂದೆ ರಾಜಾರಾಮ್​​ ಎಂಬ ವ್ಯಕ್ತಿಯ ಬಳಿ ಹೇರ್ ಮತ್ತು ಸ್ಕಿನ್ ಸಲೂನ್​ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ವೈಷಮ್ಯ ಉಂಟಾಗಿ ಕೊಲೆಯಾದ ಅಶ್ರಿತ್ ಬೇರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಇದರಿಂದ ಕೋಪಗೊಂಡ ರಾಜಾರಾಮ್ ಈತ ನನ್ನ ಕೆಲಸದಲ್ಲಿ ತೊಡಗಿದ್ದಾನೆ. ನನ್ನ ವೃತ್ತಿಯ ಗುಟ್ಟನ್ನು ಹೊರಗೆ ಹೇಳಿದರೆ ತೊಂದರೆ ಎಂದು ಅಶ್ರಿತ್​​ನನ್ನು ಮುಗಿಸಲು ಸುಪಾರಿ ಕೊಟ್ಟಿದ್ದಾನೆ. ಬಳಿಕ ಸುಪಾರಿ ಹಂತಕರು ಜೂನ್ 17ರಂದು ಅಶ್ರಿತ್​​ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

ಅದರಲ್ಲಿ ಪ್ರಮುಖ ಆರೋಪಿ ಸುಪಾರಿ ನೀಡಿದ ರಾಜಾರಾಮ್​ ತಲೆಮರೆಸಿಕೊಂಡಿದ್ದು, ಉಳಿದ ಸುಪಾರಿ ಹಂತಕರಾದ ನವೀನ್, ಅಶೋಕ್, ಪ್ರಶಾಂತ್, ಜಾನಿ, ದಿನೇಶ್, ಮಹೇಶ್ ಮತ್ತು ಮುಬಾರಕ್ ಎಂಬ 7 ಜನ ಬೆಂಗಳೂರು ಮೂಲದ ಸುಪಾರಿ ಹಂತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್, 1 ಕಾರ್, 1 ಚಾಕುವನ್ನು ವಶಪಡಿಸಕೊಳ್ಳಲಾಗಿದೆ. ಪೊಲೀಸರು ಪ್ರಮುಖ ಆರೋಪಿ, ಸುಪಾರಿ ನೀಡಿದ ರಾಜಾರಾಮ್​​ ಪತ್ತೆಗಾಗಿ ಬಲೆ ಬೀಸಿದ್ದು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details