ಕರ್ನಾಟಕ

karnataka

ETV Bharat / state

ಮೃಗಾಲಯ ಪ್ರಾಣಿಗಳ ನೆರವಿಗೆ ಧಾವಿಸಿದ ನಾಗರಿಕರು.. ಹತ್ತೇ ದಿನದಲ್ಲಿ 1 ಕೋಟಿಗೂ ಅಧಿಕ ಹಣ ಸಂಗ್ರಹ - ಕರ್ನಾಟಕ ಮೃಗಾಲಯ ಪ್ರಾಧಿಕಾರ

ಕರ್ನಾಟಕ ಮೃಗಾಲಯ ಪ್ರಾಧಿಕಾರವು ಜೂ.5ರಿಂದ ಜೂ.14ರವರೆಗೆ ಮೃಗಾಲಯಗಳಲ್ಲಿ ಪ್ರಾಣಿ - ಪಕ್ಷಿಗಳನ್ನು ದತ್ತು ಪಡೆದವರ ಸಂಖ್ಯೆ ಹಾಗೂ ಸಂಗ್ರಹವಾದ ಮೊತ್ತವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 1 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

more-than-1-crore-rupees-collected-so-for-to-several-zoo-at-karnataka
ಮೃಗಾಲಯ ಪ್ರಾಣಿಗಳ ನೆರವಿಗೆ ಧಾವಿಸಿದ ನಾಗರಿಕರು.. ಹತ್ತೇ ದಿನದಲ್ಲಿ 1 ಕೋಟಿಗೂ ಅಧಿಕ ಹಣ ಸಂಗ್ರಹ

By

Published : Jun 16, 2021, 3:55 PM IST

Updated : Jun 16, 2021, 9:05 PM IST

ಮೈಸೂರು: ಕರ್ನಾಟಕದ ವಿವಿಧ ಮೃಗಾಲಯಗಳಿಗೆ ಹತ್ತೇ ದಿನದಲ್ಲಿ ದಾನಿಗಳು ಹಾಗೂ ದತ್ತು ಸ್ವೀಕಾರದಿಂದ 1.50 ಕೋಟಿ ರೂ. ಹರಿದು ಬಂದಿದೆ. ಕೊರೊನಾದಿಂದಾಗಿ ಮೃಗಾಲಯದಲ್ಲಿನ ಪ್ರಾಣಿಗಳ ಮೇಲ್ವಿಚಾರಣೆ ಕಷ್ಟಕರವಾಗಿತ್ತು. ಈ ಹಿನ್ನೆಲೆ ದಾನಿಗಳು ನೆರವಿಗೆ ಧಾವಿಸಿದ್ದು, 1 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

ಮೈಸೂರು ಮೃಗಾಯಲಕ್ಕೆ ಹಣ ನೀಡಿದ ದಾನಿಗಳ ವಿವರ

ಮೈಸೂರು ಮೃಗಾಲಯಕ್ಕೆ 75,97,600 ರೂ., ಬನ್ನೇರುಘಟ್ಟ ಮೃಗಾಲಯಲಕ್ಕೆ 46,46,700 ರೂ., ಶಿವಮೊಗ್ಗಕ್ಕೆ 9,69,800 ಲಕ್ಷ ರೂ., ಗದಗ ಮೃಗಾಲಯಕ್ಕೆ 4,21,100 ರೂ., ಬೆಳಗಾವಿ ಮೃಗಾಲಯಕ್ಕೆ 3,82,800 ರೂ., ಹಂಪಿ 3,77,900 ರೂ., ದಾವಣಗೆರೆ 3,56,300 ರೂ, ಚಿತ್ರದುರ್ಗ ಮೃಗಾಲಯಕ್ಕೆ 2,19,200 ರೂ., ಕಲಬುರ್ಗಿ ಮೃಗಾಲಯಕ್ಕೆ 1,70,300 ಸೇರಿದಂತೆ ಒಟ್ಟಾರೆ ಕರ್ನಾಟಕ 9 ಮೃಗಾಲಯಗಳಿಗೆ 5,842 ದಾನಿಗಳು ಹಾಗೂ ದತ್ತು ಸ್ವೀಕಾರ ಮಾಡಿದವರಿಂದ 1,51,41,700 ರೂ.ಸಂಗ್ರಹವಾಗಿದೆ.

ಮೃಗಾಯಲ ಪ್ರಾಣಿಗಳ ನೆರವಿಗೆ ಧಾವಿಸಿದ ನಾಗರಿಕರು
ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದವರ ಸಂಖ್ಯೆ ಹಾಗೂ ಸಂಗ್ರಹವಾದ ಮೊತ್ತ

ಕರ್ನಾಟಕ ಮೃಗಾಲಯ ಪ್ರಾಧಿಕಾರವು ಜೂ.5ರಿಂದ ಜೂ.14ರವರೆಗೆ ಮೃಗಾಲಯಗಳಲ್ಲಿ ಪ್ರಾಣಿ - ಪಕ್ಷಿಗಳನ್ನು ದತ್ತು ಪಡೆದವರ ಸಂಖ್ಯೆ ಹಾಗೂ ಸಂಗ್ರಹವಾದ ಮೊತ್ತವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಓದಿ:ವಯನಾಡಿನಲ್ಲಿ ನಿರಂತರ ಮಳೆ: ಕಬಿನಿ ಜಲಾಶಯದ ಒಳಹರಿವು ಹೆಚ್ಚಳ

Last Updated : Jun 16, 2021, 9:05 PM IST

ABOUT THE AUTHOR

...view details