ಕರ್ನಾಟಕ

karnataka

ETV Bharat / state

ರೈತ ಹೋರಾಟ, ಹೊಸ ತಲೆಮಾರಿನ ಎಲ್ಲ ಜನರನ್ನು ಒಳಗೊಳ್ಳುವುದನ್ನು ಕಲಿಯಬೇಕು: ಸಾಹಿತಿ ಪುರುಷೋತ್ತಮ್ ಬಿಳಿಮಲೆ - ಶಿವಾಜಿ ಮಹಾರಾಜ್

ರಾಜ್ಯದಲ್ಲಿ ಶೇ 40ರಷ್ಟು ಕೃಷಿ ಭೂಮಿ ಇದ್ದು ಕೃಷಿ ಬೆಳೆ ಉತ್ಪನ್ನ ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೃತಕವಾಗಿ ಅಕ್ಕಿಯನ್ನು ಶೇಖರಿಸಿಕೊಂಡಿಲ್ವಾ? ಅನ್ಯ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನಿರಾಕರಣೆ ಮಾಡಿದರೇ ರಾಜ್ಯ ಸರ್ಕಾರಗಳು ಅಕ್ಕಿ ಇಲ್ಲವೆಂದು ಹೇಳುತ್ತಿರುವುದು ಆತಂಕದ ಸಂಗತಿ: ಹಿರಿಯ ಸಾಹಿತಿ ಪ್ರೊ ಪುರುಷೋತ್ತಮ್ ಬಿಳಿಮಲೆ.

Prof. Purushottam Bilimale spoke at the program.
ಹಿರಿಯ ಸಾಹಿತಿ ಪ್ರೊ ಪುರುಷೋತ್ತಮ್ ಬಿಳಿಮಲೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

By

Published : Jun 18, 2023, 3:45 PM IST

ಹಿರಿಯ ಸಾಹಿತಿ ಪ್ರೊ ಪುರುಷೋತ್ತಮ್ ಬಿಳಿಮಲೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರು:ಹಿಂದೆದೆಹಲಿಯಲ್ಲಿ ನಡೆದಿದ್ದ ರೈತ ಹೋರಾಟದಿಂದ ಎಲ್ಲ ತಲೆಮಾರಿನ ಜನರನ್ನು ಒಳಗೊಳ್ಳುವುದನ್ನು ಸಂಘಟನೆ ಕಲಿಯಬೇಕು. ಮಾಧ್ಯಮಗಳನ್ನು ನಂಬಿ ಹೋರಾಟ ಮಾಡಬಾರದು. ಯುವ ಸಮೂಹದ ಕೌಶಲಗಳನ್ನು ಗಮನಿಸಿ ಹೋರಾಟಕ್ಕೆ ಬಳಸಿಕೊಳ್ಳಬೇಕು ಎಂದು ಜೆಎನ್​​ಯು ವಿವಿಯ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಪ್ರೊ. ಪುರುಷೋತ್ತಮ್ ಬಿಳಿಮಲೆ ಹೇಳಿದರು.

ನಗರದ ಕುವೆಂಪುನಗರದ ಜನ ಚೇತನ ಗ್ರಾಮೀಣ ಟ್ರಸ್ಟ್ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಯುವ ಘಟಕದ ಸಹಯೋಗದಲ್ಲಿ ನಡೆದ ನವ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪಿಸಿರುವ ಯುವ ಘಟಕ ಜವಾಬ್ದಾರಿ ಹೆಚ್ಚಿದ್ದು, ಹೋರಾಟದಿಂದ ಕಾಣೆಯಾಗಿರುವ ತಲೆಮಾರನ್ನು ಚಳವಳಿಗೆ ತರಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣ. ಸೋತರು ಕೂಡ ಬಿಜೆಪಿ ಅವರಿಗೆ ಬುದ್ಧಿ ಬಂದಿಲ್ಲ. ಅನ್ಯ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನಿರಾಕರಣೆ ಮಾಡಿದರೇ ರಾಜ್ಯ ಸರ್ಕಾರಗಳು ಅಕ್ಕಿ ಇಲ್ಲವೆಂದು ಹೇಳುತ್ತಿರುವುದು ಆತಂಕದ ಸಂಗತಿ ಎಂದು ತಿಳಿಸಿದರು.

ಬಡವರ ಹಸಿವನ್ನು ನೀಗಿಸುವುದೇ ಹೇಗೆ?ಕಾಂಗ್ರೆಸ್ ಸರ್ಕಾರ ಘೋಷಿಸಿರುವ 5 ಗ್ಯಾರಂಟಿಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡಲು ನಿರಾಕರಣೆ ಮಾಡಿತು. ರಾಜ್ಯ ಸರ್ಕಾರ ನಮ್ಮಲ್ಲಿಯೂ ಅಕ್ಕಿ ಇಲ್ಲವೆನ್ನುತ್ತಿದೆ. ಹಾಗಾದರೇ ಬಡವರ ಹಸಿವನ್ನು ನೀಗಿಸುವುದೇ ಹೇಗೆ? ನಮ್ಮ ನಾಡಿನಲ್ಲಿ ಅಕ್ಕಿ ಸಮಸ್ಯೆ ಇದೆಯೇ. ರಾಜ್ಯದಲ್ಲಿ ಶೇ.40ರಷ್ಟು ಕೃಷಿ ಭೂಮಿಯನ್ನು ಹೊಂದಿದೆ ಎನ್ನುತ್ತಾರೆ. ಕೃಷಿಯ ಬೆಳೆಯ ಉತ್ಪನ್ನಗಳ ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೃತಕವಾಗಿ ಅಕ್ಕಿಯನ್ನು ಶೇಖರಿಸಿಕೊಂಡಿಲ್ವಾ? ಎಂದು ಪ್ರಶ್ನಿಸಿದರು.

ಹೊಸದಿಲ್ಲಿಯ ಐತಿಹಾಸಿಕ ರೈತ ಹೋರಾಟ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಹತ್ತಿರದಿಂದ ನೋಡಿದ್ದೇನೆ. ರೈತರ ಹೋರಾಟದಲ್ಲಿ ಇಳಿ ವಯಸ್ಸಿನ ವೃದ್ದರು, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಬುದ್ಧಿಜೀವಿಗಳು ಮತ್ತು ವಿದ್ಯಾರ್ಥಿ ಯುವ ಸಮೂಹದ ಮೂರು ತಲೆ ಮಾರುಗಳು ಭಾಗಿಯಾಗಿದ್ದವು. ಹೋರಾಟದ ವಿರುದ್ಧ ಒಂದು ತಿಂಗಳಿಗೆ ಮಾಧ್ಯಮಗಳು ಅಪಪ್ರಚಾರ, ವಾಟ್ಸಪ್ ಯುನಿವರ್ಸಿಟಿಯಿಂದ ದ್ವೇಷದ ಸಂದೇಶಗಳು ಹೀನಾಕೃತ್ಯಗಳು ಪ್ರಾರಂಭವಾದವು. 800 ಹೋರಾಟಗಾರರ ಬಲಿದಾನದೊಂದಿಗೆ ಎಲ್ಲವನ್ನು ಮೆಟ್ಟಿ ನಿಂತು ರೈತ ಹೋರಾಟ ಯಶಸ್ವಿಯಾಯಿತು ಎಂದರು.

ರಾಜ್ಯದ ಸಂಸ್ಕೃತಿ ಅಸ್ಮಿತೆ, ಅಸ್ತಿತ್ವ ಕಾಪಾಡಿಕೊಳ್ಳುವ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಆದರೆ, ಜಾತ್ಯಾತೀತ ಜನತಾದಳ ಪ್ರಾದೇಶಿಕ ಪಕ್ಷವಲ್ಲ. ಈ ಮಾತನ್ನು ಜಾತ್ಯಾತೀತ ಜನತಾದಳ ಪಕ್ಷದ ಒಂದು ಕಾರ್ಯಕ್ರಮದಲ್ಲಿಯೇ ಹೇಳಿದ್ದೇನೆ. ಪ್ರಾದೇಶಿಕದ ಪಕ್ಷದ ಕರ್ತವ್ಯ, ನಾಡಿನ ಅಸ್ಮಿತೆ-ಅಸ್ತಿತ್ವದ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಏನು ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದೆ.

ಯಾರೊಬ್ಬರು ಉತ್ತರ ಕೊಡಲಿಲ್ಲ. ಇನ್ನೂ ಬಿಜೆಪಿಯಂತು ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ನಾಯಕರೇ ಇರಲಿಲ್ಲ. ಬಿಜೆಪಿ ನಾಯಕರನ್ನು ಕೇಳಿದರೇ ಶಿವಾಜಿ ಮಹಾರಾಜ್, ಉರಿಗೌಡ ನಂಜೇಗೌಡ, ವಿಶ್ವಗುರು ಮೋದಿ ಎಂದರು, ಇದು ನಾಡಿನ ಅಸ್ಮಿತೆಯೇ? ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸರ್ವೋದಯ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮ್ ರಾಜ್, ಕಾರ್ಯದರ್ಶಿ ಬಸವರಾಜು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂಓದಿ:Petrol Diesel: ಮುಂಗಾರು ಆಗಮನ: ಪೆಟ್ರೋಲ್, ಡೀಸೆಲ್​ ಮಾರಾಟ ಇಳಿಕೆ

ABOUT THE AUTHOR

...view details