ಕರ್ನಾಟಕ

karnataka

ETV Bharat / state

ಸಂಕ್ರಾಂತಿ ನಂತರ ಸಿಹಿ ಸುದ್ದಿ ಬರಲಿ: ಶಾಸಕ ಎಸ್. ಎ ರಾಮದಾಸ್ - ಸಂಪುಟ ಪುನರ್ ರಚನೆ ಬಗ್ಗೆ ಶಾಸಕ ಎಸ್​.ಎ ರಾಮದಾಸ್​ ಹೇಳಿಕೆ

ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಯೋಜನೆ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಬುಕ್ ರೆಡಿ ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಸಕ ಎಸ್. ಎ ರಾಮದಾಸ್ ತಿಳಿಸಿದ್ದಾರೆ.

Mla-s-a-ramadas
ಶಾಸಕ ಎಸ್. ಎ ರಾಮದಾಸ್

By

Published : Jan 10, 2022, 3:37 PM IST

ಮೈಸೂರು: ಸಂಕ್ರಾಂತಿ ಹಬ್ಬದ ನಂತರ ಸಂಪುಟ ಪುನಾರಚನೆಯಾಗುವ ನಿರೀಕ್ಷೆ ಇದೆ. ಆ ಹಬ್ಬದ ನಂತರ ಮೈಸೂರಿಗೆ ಸಿಹಿ‌ಸುದ್ದಿ ಬರಲಿ ಎನ್ನುವುದು ನಮ್ಮೆಲ್ಲ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಶಾಸಕ ಎಸ್. ಎ ರಾಮದಾಸ್ ಪರೋಕ್ಷವಾಗಿ ಸಚಿವನಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಶಾಸಕ ಎಸ್. ಎ ರಾಮದಾಸ್ ಮಾತನಾಡಿದರು

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸ್ಥಾನ ಸಿಗಲಿ ಎಂಬ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದೇನೆ. 1994ರಿಂದ ಪಕ್ಷ ನನ್ನನ್ನು ಗೆಲ್ಲಿಸಿಕೊಂಡು ಬಂದಿದೆ. ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದರು.

ಪಕ್ಷಕ್ಕಾಗಿ ಕೆಲಸ ಮಾಡಿದ್ದಿನಿ, ನಾನು ಯಾವತ್ತೂ ಏನು ಕೇಳಿಲ್ಲ. ಪಕ್ಷದ ವ್ಯವಸ್ಥೆಯೊಳಗೆ ಇರುವ ವ್ಯಕ್ತಿ ನಾನು. ಆ ವ್ಯವಸ್ಥೆಯೊಳಗೆ ಕೆಲಸ ಮಾಡುತ್ತಿದ್ದಿನಿ. ನಾನು ಸಚಿವ ಆಗಿಲ್ಲ‌ ಅಂತ ಅಂದುಕೊಂಡಿಲ್ಲ ಎಂದು ತಿಳಿಸಿದರು.

ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಯೋಜನೆ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಬುಕ್ ರೆಡಿ ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಸಕ ರಾಮದಾಸ್​ ಹೇಳಿದರು.

ಓದಿ:ಕೋವಿಡ್​​ ಭೀತಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು!

For All Latest Updates

TAGGED:

ABOUT THE AUTHOR

...view details