ಕರ್ನಾಟಕ

karnataka

ETV Bharat / state

ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು.. ದೊಡ್ಡಮಟ್ಟದ ಪಕ್ಷಾಂತರ ಕಾಣಿಸುತ್ತಿಲ್ಲ.. ಜಿ ಟಿ ದೇವೇಗೌಡ - MLA GT Devegowda statement in mysore

ಮೂರು ಪಕ್ಷಗಳಲ್ಲಿ ಎಲ್ಲರಿಗೂ ಸ್ನೇಹಿತರು ಇದ್ದಾರೆ. ಹಾಗಾಗಿ ಊಟಕ್ಕೆ ಸೇರ್ತಾರೆ, ಕೆಲವರು ಕಾರ್ಡ್‌ ಆಡಲು, ಪಾರ್ಟಿಗೆ ಸೇರುತ್ತಾರೆ. ಇದರಲ್ಲಿ ರಾಜಕೀಯ ಇರುವುದಿಲ್ಲ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಇದೆ. ಇಷ್ಟು ಬೇಗ ಪಕ್ಷಾಂತರಗಳ ಮಾತು ಏಕೆ? ಎಂದು ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರಿನಲ್ಲಿ ಶಾಸಕ ಜಿ ಟಿ ದೇವೇಗೌಡ ಹೇಳಿಕೆ
ಮೈಸೂರಿನಲ್ಲಿ ಶಾಸಕ ಜಿ ಟಿ ದೇವೇಗೌಡ ಹೇಳಿಕೆ

By

Published : Jan 26, 2022, 4:57 PM IST

ಮೈಸೂರು :ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ಯಾವಾಗ ಬೇಕಾದರೂ ಬದಲಾವಣೆ ಆಗಬಹುದು. ಸದ್ಯಕ್ಕೆ ಯಾವುದೇ ಬದಲಾವಣೆಗಳಾಗುವುದಿಲ್ಲ ಅಂತಾ ಅನ್ಸುತ್ತೆ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.

ಪಕ್ಷಾಂತರ ಪರ್ವದ ಚರ್ಚೆ ಕುರಿತಂತೆ ಮೈಸೂರಿನಲ್ಲಿ ಶಾಸಕ ಜಿ ಟಿ ದೇವೇಗೌಡ ಪ್ರತಿಕ್ರಿಯೆ ನೀಡಿರುವುದು..

ನಗರದ ಬನ್ನಿಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ದೊಡ್ಡ ಮಟ್ಟದ ಪಕ್ಷಾಂತರ ಆಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ಸಮರ್ಥವಾಗಿವೆ. ಮೂರು ಪಕ್ಷಗಳಲ್ಲು ಜಿದ್ದಾಜಿದ್ದಿ ಪೈಪೋಟಿ ಇದೆ. ಹೀಗಾಗಿ, ದೊಡ್ಡ ಮಟ್ಟದ ಪಕ್ಷಾಂತರ ಲಕ್ಷಣ ಕಾಣುತ್ತಿಲ್ಲ ಎಂದರು.

ಮೂರು ಪಕ್ಷಗಳಲ್ಲಿ ಎಲ್ಲರಿಗೂ ಸ್ನೇಹಿತರು ಇದ್ದಾರೆ. ಹಾಗಾಗಿ, ಊಟಕ್ಕೆ ಸೇರ್ತಾರೆ, ಕೆಲವರು ಕಾರ್ಡ್‌ ಆಡಲು, ಪಾರ್ಟಿಗೆ ಸೇರುತ್ತಾರೆ. ಇದರಲ್ಲಿ ರಾಜಕೀಯ ಇರುವುದಿಲ್ಲ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಇದೆ. ಇಷ್ಟು ಬೇಗ ಪಕ್ಷಾಂತ ಮಾತು ಏಕೆ? ಎಂದರು.

ಮೈಸೂರಿನಲ್ಲಿ ಶಾಸಕರ ಪಟ್ಟಿ, ಹಾಗೂ ಪಕ್ಷಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಸಕರ ಲಿಸ್ಟ್ ಇದೆ ಎಂದು ಹೇಳುವವರು ಲಿಸ್ಟ್ ಬಿಡುಗಡೆ ಮಾಡಿದ್ದಾರಾ?. ಹಾಗಾದರೆ, ಯಾವ ಲಿಸ್ಟ್ ಇದೆ ಅಂತಾರೆ ಅವರನ್ನ ಬಿಡುಗಡೆ ಮಾಡಲು ಹೇಳಿ.

ಚುನಾವಣೆ ಬೇಗ ಬಂದು ಬಿಡುತ್ತದೆ ಎಂಬ ಆತುರದಲ್ಲಿ ಕೆಲವರು ಹೀಗೆಲ್ಲ ಮಾತನಾಡುತ್ತಿದ್ದಾರೆ. ಕೆಲವು ಪಕ್ಷಾಂತರ ಕೊನೆ ಕ್ಷಣದಲ್ಲಿ ನಿರ್ಧಾರವಾಗುತ್ತದೆ. ಅದಕ್ಕೆ ಇಷ್ಟು ಆತುರ ಬೇಡ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details