ಕರ್ನಾಟಕ

karnataka

By

Published : Mar 3, 2021, 11:42 AM IST

ETV Bharat / state

ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಪಿತೂರಿ: ಸಿ.ಪಿ.ಯೋಗೇಶ್ವರ್

ರಮೇಶ್ ಜಾರಕಿಹೊಳಿ ದೈವ ಭಕ್ತ. ಇಂತಹ ಕೆಲಸ ಮಾಡುವುದಿಲ್ಲ. ನೈತಿಕವಾಗಿ ಅವರ ಪರ ನಿಲ್ಲುತ್ತೇವೆ ಎಂದು ಸಿಡಿ ಪ್ರಕರಣದ ಕುರಿತು ಸಚಿವ ಸಿ.ಪಿ‌.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.

Minister CP Yogeshwar reaction
ಸಿ.ಪಿ.ಯೋಗೇಶ್ವರ್

ಮೈಸೂರು: ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ರಾಜಕೀಯ ಪಿತೂರಿ ನಡೆದಿದೆ‌ ಎಂದು ನನಗೆ ಅನಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ‌.ಯೋಗೇಶ್ವರ್ ಹೇಳಿದರು.

ಸಿಡಿ ಪ್ರಕರಣದ ಕುರಿತು ಸಚಿವ ಸಿ.ಪಿ‌.ಯೋಗೇಶ್ವರ್ ಪ್ರತಿಕ್ರಿಯೆ..

ಚಾಮುಂಡಿ ಬೆಟ್ಟದ ತಪ್ಪಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ದೈವ ಭಕ್ತ. ಇಂತಹ ಕೆಲಸ ಮಾಡುವುದಿಲ್ಲ. ನೈತಿಕವಾಗಿ ಅವರ ಪರ ನಿಲ್ಲುತ್ತೇವೆ. ನಾನು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದರು.

ಇಂದು ಮಧ್ಯಾಹ್ನ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅದರ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ಊಹಾಪೋಹದ ಬಗ್ಗೆ ಮಾತನಾಡುವುದಿಲ್ಲ ಎಂದು ಯೋಗೇಶ್ವರ್​ ಹೇಳಿದರು.

ಓದಿ:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಜಗದೀಶ್ ಶೆಟ್ಟರ್, ವಿಜಯೇಂದ್ರ ಪ್ರತಿಕ್ರಿಯೆ

ABOUT THE AUTHOR

...view details