ಕರ್ನಾಟಕ

karnataka

ETV Bharat / state

ಕೇಂದ್ರದ ಶೇ. 98ರಷ್ಟು ನೆರೆ ಪರಿಹಾರ ಈಗಾಗಲೇ ತಲುಪಿದೆ: ವಿಪಕ್ಷಗಳ ಹೇಳಿಕೆಗೆ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ - Minister C T Ravi visited to Suttur Today

ದಸರಾ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಸಲಹೆ ಬಂದಿದೆ. ನಾಡಹಬ್ಬ ವಿಶ್ವದ ಹಬ್ಬ ಆಗಬೇಕು.ಈ ನಿಟ್ಟಿನಲ್ಲಿ ದಸರಾ ಪ್ರಾಧಿಕಾರ ರಚನೆಯಾಗಬೇಕು‌ ಎಂದ ಸಚಿವ ಸಿ.ಟಿ ರವಿ.

ವಿಪಕ್ಷಗಕ ಕುರಿತು  ಸಚಿವ ಸಿ.ಟಿ ರವಿ ಲೇವಡಿ

By

Published : Oct 8, 2019, 11:57 AM IST

Updated : Oct 8, 2019, 12:54 PM IST

ಮೈಸೂರು:ನೆರೆ ಪೀಡಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸಿ ಕೆಲಸ ಮಾಡುತ್ತಿದೆ. ಟೀಕೆ ಮಾಡುವವರಿಗೆ ಉತ್ತರ ಕೊಡೋಕಾಗಲ್ಲ. ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಅವರನ್ನು ಮೆಚ್ಚಿಸೋಕಾಗಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಸಿ.ಟಿ.ರವಿ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಪರಿಹಾರ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾತ್ಕಾಲಿಕ ಪರಿಹಾರವನ್ನು ಘೋಷಣೆ ಮಾಡಿದ್ದೇವೆ. ₹3500 ಸಾವಿರ ಕೊಡುತ್ತಿದ್ದ ಪರಿಹಾರವನ್ನು ₹10000 ಸಾವಿರಕ್ಕೆ ಏರಿಕೆ ಮಾಡಿದ್ದೇವೆ. ಶೇ. 98% ಪರಿಹಾರ ತಲುಪಿದೆ. ಟೀಕೆಗಳಿಗೆ ಉತ್ತರ ಕೊಡಲುವುದಿಲ್ಲ ಎಂದರು.

ದಸರಾ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಸಲಹೆ ಬಂದಿದೆ. ರಾಜಕೀಯ ಅನಿಶ್ಚಿತತೆಯಿಂದಾಗಿ ಪ್ರಾಧಿಕಾರ ರಚಿಸಲಾಗಿಲ್ಲ. ನಾಡಹಬ್ಬ ವಿಶ್ವದ ಹಬ್ಬ ಆಗಬೇಕು.ಈ ನಿಟ್ಟಿನಲ್ಲಿ ದಸರಾ ಪ್ರಾಧಿಕಾರ ರಚನೆಯಾಗಬೇಕು‌ ಎಂದು ತಿಳಿಸಿದರು.

ದಸರಾ ಆಚರಣೆಗೂ 6 ತಿಂಗಳ ಮುಂಚಿತವಾಗಿ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಕೆಲಸ ಆಗಬೇಕು. ಆಗ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

Last Updated : Oct 8, 2019, 12:54 PM IST

ABOUT THE AUTHOR

...view details