ಕರ್ನಾಟಕ

karnataka

By

Published : Nov 23, 2019, 12:29 PM IST

ETV Bharat / state

ಸಾಲಗಾರರ ಕಾಟಕ್ಕೆ ಮನನೊಂದು ಲಾಡ್ಜ್​ನಲ್ಲೇ ವ್ಯಕ್ತಿ ನೇಣಿಗೆ ಶರಣು

ಸಾಲಗಾರರ ಕಾಟ ತಾಳಲಾರದೆ ಪ್ರೇಮ್ ಕುಮಾರ್ ಎಂಬಾತ ತಾನು ಕೆಲಸ ಮಾಡುತ್ತಿದ್ದ ಲಾಡ್ಜ್​ನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ಸಾಲಗಾರರ ಕಾಟ : ಮನನೊಂದು ಲಾಡ್ಜ್​ನಲ್ಲೇ ವ್ಯಕ್ತಿ ನೇಣಿಗೆ ಶರಣು

ಮೈಸೂರು: ಸಾಲಗಾರರ ಕಾಟ ತಾಳಲಾರದೆ ತಾನು ಕೆಲಸ ಮಾಡುತ್ತಿದ್ದ ಲಾಡ್ಜ್​ನಲ್ಲಿಯೇ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ಸಾಲಗಾರರ ಕಾಟಕ್ಕೆ ಮನನೊಂದು ಲಾಡ್ಜ್​ನಲ್ಲೇ ವ್ಯಕ್ತಿ ನೇಣಿಗೆ ಶರಣು

ಮೂಲತಃ ನಂಜನಗೂಡು ಪಟ್ಟಣದ ಕುರುಬಗೇರಿ ನಿವಾಸಿಯಾದ ಪ್ರೇಮ್ ಕುಮಾರ್ (55) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಂಜನಗೂಡು ಪಟ್ಟಣದ ಲಾಡ್ಜ್​ನಲ್ಲಿ ಕೆಲಸ ಮಾಡುತ್ತಿದ್ದ ಈತ ಮೈಸೂರಿನ ಖಾಸಗಿ ಬ್ಯಾಂಕ್ ಹಾಗೂ ನಂಜನಗೂಡು ಪಟ್ಟಣದ ಕೆಲವು ಸ್ವಸಹಾಯ ಸಂಘಗಳಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲಗಾರರು ಲಾಡ್ಜ್​ಗೆ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಇನ್ನು ಈತ ನಂಜನಗೂಡಿನಲ್ಲಿ ಮನೆ ಕಟ್ಟಲು ಸಾಲ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ಸಂಬಂಧ ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details