ಕರ್ನಾಟಕ

karnataka

ETV Bharat / state

ತಪಾಸಣೆ ವೇಳೆ ಎಂಜಿನಿಯರ್​ ಸಾವು ಪ್ರಕರಣ.. ಪೊಲೀಸರ ವರ್ತನೆ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ - ಬೈಕ್ ಸವಾರ ಸಾವು

ವಾಹನ ಸವಾರರು ಸಂಚಾರಿ ನಿಯಮ ಸರಿಯಾಗಿ ಪಾಲಿಸುತ್ತಾರೆ. ಅದಕ್ಕೆ ಪೊಲೀಸರು ಸೂಕ್ತ ಮಾರ್ಗದರ್ಶನ ಮಾಡಬೇಕು. ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುವುದನ್ನು ಬಿಡಬೇಕು..

locals condemn the behavior of the police in Mysuru
ಪೊಲೀಸರ ವರ್ತನೆ ಖಂಡಿಸಿ ಸ್ಥಳೀಯರ ಪ್ರತಿಭಟನೆ

By

Published : Mar 23, 2021, 3:07 PM IST

ಮೈಸೂರು :ತಪಾಸಣೆ ವೇಳೆ ಬೈಕ್‌ ಸವಾರನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಚಾರಿ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ಹಾಗೂ ಜೆಡಿಎಸ್ ಮುಖಂಡರಿಂದ ಹಿನಕಲ್ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.

ಪೊಲೀಸರ ವರ್ತನೆ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ

ಟ್ರಾಫಿಕ್ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಕೆಲವು ವೃತ್ತಗಳಲ್ಲಿ ಪೊಲೀಸರಿಂದ ಉದ್ದೇಶಪೂರ್ವಕವಾಗಿ ವಾಹನ ಸವಾರರಿಗೆ ಕಿರುಕುಳ ನೀಡಲಾಗುತ್ತಿದೆ. ದಾಖಲಾತಿ ಇದ್ದರೂ ಪದೇಪದೆ ಪರಿಶೀಲನೆ ಮಾಡಿ ತೊಂದರೆ ಕೊಡುತ್ತಾರೆ ಎಂದು ಆರೋಪಿಸಿದರು.

ವಾಹನ ಸವಾರರು ಸಂಚಾರಿ ನಿಯಮ ಸರಿಯಾಗಿ ಪಾಲಿಸುತ್ತಾರೆ. ಅದಕ್ಕೆ ಪೊಲೀಸರು ಸೂಕ್ತ ಮಾರ್ಗದರ್ಶನ ಮಾಡಬೇಕು. ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಪೊಲೀಸ್​ ಲಾಠಿಗೆ ಸಿಲುಕಿ ಬೈಕ್​ ಸವಾರ ಸಾವು: ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಹಿಂಬದಿ ಸವಾರನ ಹೇಳಿಕೆ.!

ABOUT THE AUTHOR

...view details